’ಕವಿಯ ತಾಲೀಮು ಹವ್ಯಾಸಿಯ ಮರುಳು..’ – ಕಾವ್ಯಾ ಕಡಮೆ ನಾಗರಕಟ್ಟೆ

ಆ್ಯಷ್-ಟ್ರೇ

ಕಾವ್ಯ

ಕಾವ್ಯಾ ಕಡಮೆ ನಾಗರಕಟ್ಟೆ

1
ಬೊಗಸೆಯೊಡ್ಡಿ ಬಳಿ ಕರೆವ ಅರಳು ಪುಷ್ಪದಲಿ
ಖರೇ ಖರೇ ಹೂವೊಂದರಳಿ ನಿಂತರೂ ಸರಿ
ಈ ಎದೆಯ ತುಂಬಾ ಭರಪೂರ ಉಷ್ಣ ಗೂಡು
ಮೇಲೆ ಸಿಂಪಡಿಸೋ ಬೂದು ಬಣ್ಣದಿಬ್ಬನಿಮೋಡ
ಶ್ವಾಸದುರಿಯಲಿ ನರಳಿದ ನೆರಳು
ಎರಡೇ ಬೆರಳಂಚಲ್ಲಿ ಹಿಡಿವ ಜೀವ
ತೂಗುವ ಸುರುಳಿ ಸುತ್ತಿದ ಸರಳು
ಜ್ವಾಲೆಗಾನಿಸಿಕೊಂಡೇ ಇರಿವ ಕಾರಿರುಳಂತೆ
ಸುಖ ಜಾರಿದರೂ ತೀರಿ ಹೋಗದು
ದುಃಖದುರುಳು
ಹುಚ್ಚನ ಸೆಳೆತ ವ್ಯಾಮೋಹಿಯ ಸ್ಪೂರ್ತಿ
ಕವಿಯ ತಾಲೀಮು ಹವ್ಯಾಸಿಯ ಮರುಳು
ನೊಂದ ಪ್ರೇಮಿಯ ವಿರಹದುತ್ತರ ಗೆದ್ದವನ
ಕೇಕೆ ಪ್ರವಾಸಿಯ ಶೋಟೈಮ್ ತೋರುಭಂಗಿ
ಧೈರ್ಯ ಬೇಡಿದವಳ ರಿವಾಜು ಕವಿತೆಯ
ಬಿಸಿ ಮೊನಚು- ಎಲ್ಲ ನಿನ್ನಲಿ ಲೀನವಾದರೂ-
ಎದೆಯ ಧಗೆ ಸುರುಳಿ ಸುರುಳಿ ವರುಣನ
ಸೇರಿ ಉಳಿದ ಭುವಿಯನ್ನಷ್ಟೇ ಉಳಿಸಿಕೊಂಡ
ಸುಡುವೊಡಲ ಗಾಯಗೊಂಡ ಹೂದಾನಿಯೇ-
ತಳಿರು ಪುಷ್ಪದುರಿಯಿಂದಲೇ ಅರಳಿ ನಿಂತ
ನಿಜದ ಹೂವಿಗೆ ಅದೇಕೆ ಮುಖವ ಕೊಟ್ಟು
ಉತ್ತರಿಸದೇ ಕರಗಿ ಹೋದೆ?

‍ಲೇಖಕರು G

August 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಸುಧಾ ಚಿದಾನಂದಗೌಡ

    ನಿಜದ ಹೂವಿಗೆ ಮುಖಕೊಟ್ಟು….
    ಉತ್ತರಿಸದೆ ಹೋದವನು ಪರಾಗದ ಕರಗದ ಗಂಧದಲಿ ಗಂಧವಾಗಿ ಹೋಗಿರಬಹುದು…
    ಹೊಸ ಭಾವನೆಗಳ ಜೋಕಾಲಿ ನಿನ್ನ ಕವಿತೆ ಕಾವ್ಯಾ…

    ಪ್ರತಿಕ್ರಿಯೆ
  2. parashuram petkar

    ಕವಿತೆ ಚನ್ನಾಗಿದೆ. ಭಾವಪೂರ್ಣವಾಗಿ ಅರ್ಥಕ್ಕೆ ಸಂವೇದನಾತ್ಮಕ ಸೋಕ್ಷ್ಮತೆ ಒಳಗೊಂಡು ಓದುವಂತೆ ಮಾಡುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: