'ಕವಿತೆ ಚಿಟ್ಟೆಯಾಗಿದೆ…' – ಸ್ಮಿತಾ ಅಮೃತರಾಜ್ ಕವಿತೆ

 

ಸ್ಮಿತಾ ಅಮೃತರಾಜ್

ಬಿಳಿಯ ಹಾಳೆಗಳ ಮೇಲೆ
ಒಂದೊಂದೇ ಅಕ್ಷರಗಳನ್ನು
ಆಯ್ದು ತಂದು ಜೋಡಿಸುತ್ತಿರುವೆ
ಖಾಲಿ ಬಿದ್ದ ಕ್ಷಣಗಳು ತುಂಬಿಕೊಳ್ಳುತ್ತಿವೆ.
 
ಅಕ್ಷರಗಳೆಲ್ಲಾ ಪದಗಳಾಗುತ್ತಿವೆ
ಗೊತ್ತಿದೆ ತಾನೇ..?ಪದಗಳು
ಬರೇ ಪದಗಳಲ್ಲ.
ನನ್ನ ತುಂಬು ಮೌನದಿಂದ
ಅಂಕುರಿಸಿದ ಭಾವಗಳು.

ಮಾತಿನ ತಂತುಗಳೆಲ್ಲಾ ತತ್ತರಿಸಿ
ಕತ್ತರಿಸಿಕೊಂಡು ಬಿದ್ದಿವೆ.
ಬಿದ್ದು ಹೊದ ಮಾತುಗಳನ್ನು
ಪದಗಳೇ ಬಂದು ಮೌನವಾಗಿ
ಮೇಲೆತ್ತಬೇಕಷ್ಟೆ.
 
ಧ್ಯಾನವಿಟ್ಟು ಪದ ಹೊಸೆದ ಫಲ
ಪದಗಳೆಲ್ಲಾ ಕವಿತೆಗಳಾಗಿ
ತೆವಳುತ್ತಿವೆ.
ಅಗೋ ! ಈಗ ನೋಡು ಕವಿತೆ
ಚಿಟ್ಟೆಯಾಗಿಬಿಟ್ಟಿದೆ.
 
ಚಿಟ್ಟೆ ಕವಿತೆ ಹಾರಿ ಬಂದು
ಏನಾದರೂ ಅರುಹಿತೇ
ಅಲ್ಲಿ?
ಮನಸ್ಯಾಕೋ ಸುಮ್ಮಗೆ ಮುದಗೊಂಡು
ಹಾಡುತ್ತಿದೆಯಲ್ಲ ಇಲ್ಲಿ..!
 

‍ಲೇಖಕರು G

January 1, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಸೊಗಸಾದ ಕವಿತೆ.ಹೊಸ ವರ್ಷದ ಶುಭ ಆಶಯಗಳು.ಕವಿತೆಗೆ,ನಿಮಗೆ ಮತ್ತು ಅವದಿಗೆ.

    ಪ್ರತಿಕ್ರಿಯೆ
  2. ಬಾಲಸುಬ್ರಹ್ಮಣ್ಯ ಕಂಜರ್ಪಣೆ

    ಪದ್ಯ ಚೆನ್ನಾಗಿದೆ. ಅಭಿನಂದನೆ.
    ಬಾಲಸುಬ್ರಹ್ಮಣ್ಯ ಕಂಜರ್ಪಣೆ

    ಪ್ರತಿಕ್ರಿಯೆ
  3. mmshaik

    hosa varshkke..hosa bhavada kavite..nice..smita hosa varshda shubhaashyagaLu..avdhige,avadhi odugarige…….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: