ಕಲಿಗಣನಾಥ ಅವರ ‘ಗುಡದೂರು’

ಇನ್ನೂ ಮಲಗಿದಂತೆಯೇ ಇರುವ ಹೈದರಾಬಾದ್ ಕರ್ನಾಟಕವನ್ನು ಎಚ್ಚರಿಸಲೋ ಎಂಬಂತೆ ಸಾಲು ಸಾಲು ಕಥೆಗಾರರು ಬರುತ್ತಿದ್ದಾರೆ. ಅವರೊಳಗಿನ ಅರಿವು ಹೊಸ ಬೆಳಕಾಗಿದೆ. ಅಂತಹವರಲ್ಲಿ ಕಲಿಗಣನಾಥ ಗುಡದೂರು ಅವರೂ ಒಬ್ಬರು. ಅವರ ಕಥೆಗಲ್ಲಿ ಇರುವ ತಹತಹ ಮೊದಲ ಸಂಕಲನ ‘ಉಡಿಯಲ್ಲಿಯ ಉರಿ’ ಯಲ್ಲಿಯೇ ಗೊತ್ತಾಗಿ ಹೋಗಿದೆ.

ಹೈದರಾಬಾದ್ ಕರ್ಣಾಟಕದ ದೊಡ್ಡ ಜೀವ ಸಿ ಚನ್ನಬಸವಣ್ಣ ಅವರ ಮುಚ್ಚಟೆಯಲ್ಲಿ ಅರಳಿದ ಈ ಕಥೆಗಾರ ಕೂಸುಗಳು ಬೆಳೆದು ನಿಂತಿರುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಕಲಿಗಣನಾಥ ತಮ್ಮ ಎರಡನೆಯ ಸಂಕಲನ ‘ಮತಾಂತರ’ಕ್ಕೆ ಇನ್ನಿಲ್ಲದ ಕಿರುಕುಳವನ್ನು ಕಂಡವರು. ನೊಂದವರು.

ಈ ಎಲ್ಲವನ್ನೂ ಮೀರಿ ಈಗ ‘ಮಾಮೂಲಿ ಗಾಂಧಿ’ ಮೂಲಕ ಮತ್ತೆ ಓದುಗರ ಮುಂದೆ ಬರುತ್ತಿದ್ದಾರೆ. ಅವರ ನೊಂದ ಮನಕ್ಕೆ ಈ ಸಂಕಲನ ಒಂದಿಷ್ಟು ತಂಪು ತರಲಿ ಎಂದು ಹಾರೈಸುತ್ತಾ ಅವರು ಇತ್ತೀಚಿಗೆ ಆರಂಭಿಸಿರುವ ‘ಗುಡದೂರು’ ಬ್ಲಾಗ್ ಗೆ ಭೇಟಿ ಕೊಡಿ ಎಂಬ ಮನವಿ ನಿಮ್ಮ ಮುಂದೆ ಇಡುತ್ತಿದ್ದೇವೆ.

cover-p-11

‍ಲೇಖಕರು avadhi

January 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. basavaraja halli

    ತಮ್ಮ ನೂರು ನೋವುಗಳನ್ನು, ಅಪಮಾನಗಳನ್ನು ಪ್ರಪಾತಕ್ಕೆ ನೂಕಿ ಸದಾ ಸೃಜನಶೀಲತೆಯತ್ತ ಕಣ್ಣುಹಾಯಿಸುತ್ತಾ ವಾಸ್ತವದ ನೆಲೆಗಟ್ಟಿನಲ್ಲಿ ಜೀವಂತಿಕೆಯ ಕಥೆಗಳನ್ನು ಬರೆಯುತ್ತಿರುವ ನನ್ನ ಗುರುಗಳಾದ ‘ಕಲಿಗಣನಾಥ ಗುಡದೂರು’ ಅವರ ಬಗ್ಗೆ ‘ಲೈಟ್ ಆ್ಯಂಡ್ ಸ್ವೀಟ್’ ಆಗಿ ಬರೆಯುವ ಮೂಲಕ ಅವರ ‘ಗುಡದೂರು’ ಗೆ ತಮ್ಮ ಅವಧಿಯಲ್ಲಿ ಜಾಗ ನೀಡಿದ್ದಕ್ಕೆ ಜಿ.ಎನ್.ಮೋಹನ್ ಸರ್ಗೆ ತುಂಬಾ ತುಂಬಾ ಧನ್ಯವಾದ.
    -ಬಸವರಾಜ ಹಳ್ಳಿ

    ಪ್ರತಿಕ್ರಿಯೆ
  2. basavaraajahalli

    avdhiyalli kaligananath Gudadur avar
    a ‘gudadooru’ Blognnu Sherpade Maduva moolak
    mattobba Kathegararanna Parichayisiddiri
    Tumbu Thanks – Basavaraja Halli

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: