ಕಡಲು ಸೀಳುವ ಕರಿ ಬುರ್ಕಾ, ಕೇಸರಿ ಶಾಲುಗಳು..!!

ಬೊಳುವಾರು ಮಹಮ್ಮದ್ ಕುಂಞಿ

ಬಹಳ ವರ್ಷಗಳ ಹಿಂದೆಯೆಲ್ಲ, ರಾತ್ರಿಯ ಕೊನೆಯ ಜಾವದಲ್ಲೇಳುವ
ಬೆಂಗರೆಯ ( ಕಡಲಬದಿಯ) ಹಿಂದೂ-ಮುಸ್ಲಿಮ್ ಪುರುಷರು,
ಪುಟ್ಟಪುಟ್ಟ ನಾಡದೋಣಿಗಳನ್ನೇರಿ ಕಡಲು ಸೀಳಲು ಹೋದರೆ,
ಅವರನ್ನು ನಿರೀಕ್ಷಿಸುತ್ತಾ ಕಡಲಕರೆಯಲ್ಲಿ ಮನೆಮಂದಿಯೆಲ್ಲ
ಆತಂಕದಿಂದ ಕುಳಿತಿರುತ್ತಿದ್ದರು.

ನಿತ್ಯವೂ ಸಾವಿನ ಮನೆಯ ಕದತಟ್ಟಿ ಬರುವ ಆ ಮೀನುಗಾರರಿಗೆ
ಬದುಕಿನ ಮೇಲೆ ಅಗಾಧವಾದ ಪ್ರೀತಿಯಿತ್ತು ಎಂಬುದಕ್ಕೆ
ಉದಾಹರಣೆಯೆಂದರೆ;
-ಬಹಳ ಹಿಂದೊಮ್ಮೆ ಮುತ್ತುಪ್ಪಾಡಿಯಲ್ಲಿ ಕೋಮುಗಲಭೆಯಾಗಿದ್ದಾಗ,
ಎರಡೂ ಕೋಮಿನವರು ಓಡಿಹೋಗಿ ರಕ್ಷಣೆ ಪಡೆದದ್ದು
ಬೆಂಗರೆಯ ಅಪರಿಚಿತರ ಮನೆಗಳಲ್ಲಿ.

 

ಆದರೀಗ ಎಲ್ಲ ತಿರುವುಮುರುವಾಗಿದೆ. ಕೂಡುರಸ್ತೆಗಳ
‘ಮಾರಾಟದ ವಸ್ತು’ಗಳಾಗಿರುವ ಕರಿ ಬುರ್ಕಾ, ಕೇಸರಿ ಶಾಲುಗಳು,
ಮನೆಯಿಂದ ಹೊರಗೆ ಹೋಗಿರುವ ಮಕ್ಕಳು,
ಜೀವಸಹಿತ ಮನೆಗೆ ಮರಳುವುದನ್ನು,
ಅದೇ ಹಳೆಯ ಆತಂಕದಿಂದ ಕಾಯುವಂತೆ ಮಾಡಿದೆ.

‍ಲೇಖಕರು Avadhi GK

February 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: