-ಬಿ ಎ ವಿವೇಕ ರೈ

ನಾನೀಗ ಕಡಲಾಚೆ
ಪನಿಯಲ್ಲಿ ಪನಿಯಾಗಲು
ಆಗಲು ಆಗಲು ಆಗಲು
ಹೊರಟಿದ್ದೇನೆ.
ಕಟ್ಟಿದ ಮನೆಗಳೆಷ್ಟೋ
ಬಿಟ್ಟ ಮನೆಗಳೆಷ್ಟೋ
ಮರೆತುಹೋಗಿದೆ ಲೆಕ್ಕ
ಲೆಕ್ಕಾಚಾರದ ಬದುಕು ಮುಗಿದುಹೋಗಿದೆ
ಕೊನೆಮುಟ್ಟಲು ಅಲ್ಲ
ಮನ ಮುಟ್ಟಲು
ಎಲ್ಲಿಯೂ ನಿಲ್ಲದೆ ದಾಟುತ್ತಿದ್ದೇನೆ
ಬರ್ಲಿನ್ ಗೋಡೆ ತೂರಿ ಕಳೆಯಿತು ಇಪ್ಪತ್ತು ವರ್ಷ
ನಿಮ್ಮ ಚೇತನ ನಮ್ಮನಗಲಿ ಹದಿನೈದು
ಆದರೆ ನಮ್ಮವರಿನ್ನೂ ಕಟ್ಟುತ್ತಿದ್ದಾರೆ
ಹಿಮಾಲಯದ ಗೋಡೆಗಳನ್ನು
ಮಂದರಪರ್ವತದ ಮನೆಗಳನ್ನು
ಅವರಿಗೆ ಹೇಳಲಾಗುವುದಿಲ್ಲ ‘ಆಗು ಆಗು ಆಗು ‘
ಈಗ ಹೇಳಬೇಕಾದದ್ದು ಒದ್ದು
‘ಹೋಗು ಹೋಗು ಹೋಗು ‘
ಕಡಲಾಚೆಯ ಹನಿಯ ಕವನ
ನಿಮಗೆ ಇವೂ ಇಷ್ಟವಾಗಬಹುದು…





0 Comments