ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓ..ಭೈರಪ್ಪ..!

“ಕವಲು” ನಂತರ ಭೈರಪ್ಪನವರ ಬಗ್ಗೆ ಸುಮಾರು ಎಷ್ಟು ಕಾಲಮ್ಮು ಸೆಂಟಿಮೀಟರ್ ಲೇಖನಗಳು (ಸುದ್ದಿ, ಸಂದರ್ಶನ, ವಿಮರ್ಷೆ ಎಲ್ಲವೂ ಸೇರಿದಂತೆ) ನಮ್ಮ ಪತ್ರಿಕೆಗಳಲ್ಲಿ ಬಂದಿರಬಹುದು? ಇದನ್ನು ಕೂತು ಲೆಕ್ಕಾ ಹಾಕಬೇಕು ಅನ್ನುವ ನನ್ನ ಮತ್ತು  ನನ್ನ ಸ್ನೇಹಿತರೊಬ್ಬರ ಪ್ರಾಜೆಕ್ಟು ನಮ್ಮ ಸೋಮಾರಿತನದಿಂದ ನಿಂತೇ ಹೋಗಿದೆ. ಸುದ್ದಿ ತಾಜಾ ಇದ್ದಾಗ ಇಂಥ ಕೆಲಸ ಮಾಡಿದರೆ ಇದಕ್ಕೊಂದು ಬೆಲೆ. ಇಷ್ಟು ದಿನ ಆಗಿ ಕಾದಂಬರಿ ಹುಲುಮಾನವರಿಗೆ ಎಣಿಸಲಾಗದಷ್ಟು ಮುದ್ರಣಗಳನ್ನು  ಕಂಡ ಮೇಲೆ ಮತ್ತೆ ಇದರ ಬಗ್ಗೆ ಬರೆಯಲಿಕ್ಕೆ ನ್ಯೂಸ್ ಪೆಗ್ ಆದರೂ ಏನುಂಟು ಅಂತ ನಮಗೆ ನಾವು ಹೇಳಿಕೊಂಡು ಸುಮ್ಮನಾಗಿದ್ದೇವೆ. (ನಿಮಗೆಲ್ಲ ಗೊತ್ತಿರುವ ಹಾಗೆ ಪತ್ರಕರ್ತರಿಗೆ ಪೆಗ್ಗು ಮತ್ತು ನ್ಯೂಸ್ ಪೆಗ್ಗುಗಳೆರಡೂ ತುಂಬ ಮುಖ್ಯ.)
ಆದರೆ, ಮೊದಲಿನಷ್ಟು ದಿನಕ್ಕೆರಡಲ್ಲದಿದ್ದರೂ ಭೈರಪ್ಪನವರ ಬಗ್ಗೆ ಲೇಖನಗಳು ಬರುವುದಂತೂ ನಿಂತಿಲ್ಲ. ಅವರ ಹುಟ್ಟುಹಬ್ಬ ಅಂತಲೋ, ಹಾಸನದ ಅವರ ಊರಿಗೆ ಹೋದರು ಅಂತಲೋ, ಶಿವಮೊಗ್ಗೆಯಲ್ಲಿ ರಸಾನುಭವದ ಬಗ್ಗೆ ಲೆಕ್ಚರ್ ಅಂತಲೋ… ಹೀಗೆ. ಕೊನೆಗೆ ನಾವೆಲ್ಲ ಸೇಬು ತಿನ್ನಬೇಕಾ ಅಥವಾ ಪೇರಳೆಹಣ್ಣು ತಿನ್ನಬೇಕಾ ಅನ್ನುವ ಲೇಖನದಲ್ಲಿಯೂ ಭೈರಪ್ಪನವರ ಪ್ರಸ್ತಾಪ ನಾವು ಕಾಣಬಹುದು. ನ್ಯೂಸ್ ಪೆಗ್ ಅಂತೆಲ್ಲಾ ಹೇಳೋದೂ ನಮ್ಮಂಥ ಸೋಮಾರಿಗಳ ಇನ್ನೊಂದು ಲಕ್ಷಣ ಅನ್ನುವುದಕ್ಕೆ ಈ ಲೇಖನಗಳ ಜಡಿಮಳೆಯೇ ಸಾಕ್ಷಿ.
ಪೂರ್ಣ ಓದಿಗೆ: ಬಾಗೇಶ್ರೀ

‍ಲೇಖಕರು avadhi

28 September, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading