ಥಟ್ಟನೆ ಕಬೀರನ ಒಂದು ಗೀತೆ ನೆನಪಿಗೆ ಬಂತು
ಅದನ್ನಿಲ್ಲಿ ಅವಧಿಯ ಓದುಗರಿಗಾಗಿ ಕನ್ನಡಿಸಿ ಕೊಟ್ಟಿದ್ದೇನೆ.
ಗೋಪಾಲ ವಾಜಪೇಯಿ
‘ನನ್ನನ್ನೆಲ್ಲೆಲ್ಲೋ ಹುಡುಕುತಿ…’
ಹಿಂದಿ ಮೂಲ : ‘ಮೊಕೋ ಕಹಾಂ ಢೂಂಡೇರೆ ಬಂದೇ…’
ನನ್ನನ್ನೆಲ್ಲೆಲ್ಲೋ ಹುಡುಕುತಿ ದಾಸಾ ನಾನಿರುವೆನು ನಿನ್ನಾ ಬಳಿಗೆ
ತೀರ್ಥದೊಳಿಲ್ಲ, ಮೂರ್ತದೊಳೂ ಇಲ್ಲ ನಾ ಏಕಾಂತ ನಿವಾಸದೊಳು ಇಲ್ಲ
ಮಂದಿರದೊಳಿಲ್ಲ, ಮಸೀದೆಯೊಳಿಲ್ಲ ನಾ ಕಾಬಾ ಕೈಲಾಸದೊಳು ಇಲ್ಲ
ಇರುವೆನು ನಿನ್ನಾ ಬಳಿಗೆ ದಾಸಾ ನಾನಿರುವೆನು ನಿನ್ನಾ ಬಳಿಗೆ
ಜಪದೊಳು ನಾನಿಲ್ಲ, ತಪದೊಳು ನಾನಿಲ್ಲ, ವ್ರತ-ಉಪವಾಸದೊಳು ನಾನಿಲ್ಲ
ಕ್ರಿಯಾ-ಕರ್ಮದೊಳು ನಾನಿಲ್ಲವಯ್ಯ, ಯೋಗ ಸಂನ್ಯಾಸದೊಳಿಲ್ಲ
ಪ್ರಾಣದೊಳಿಲ್ಲ ನಾ ಪಿಂಡದೊಳಿಲ್ಲ, ಬ್ರಹ್ಮಾಂಡ ಆಕಾಶದೊಳು ಇಲ್ಲ
ಪ್ರಕೃತಿ ಗರ್ಭದಿ ನಾನಿಲ್ಲವಯ್ಯ, ಶ್ವಾಸ ನಿಃಶ್ವಾಸದೊಳು ಇಲ್ಲ
ಹುಡುಕುವವಗೆ ನಾನು ತಕ್ಷಣ ಸಿಗುವೆ ಎಂದಿಗೂ ತಡಮಾಡುವವನಲ್ಲ
ಹೇಳುವ ಕಬೀರ ಕೇಳಿ ಸಾಧುಗಳಿರ ಎಲ್ಲರ ವಿಶ್ವಾಸದೊಳಗೆ
ನಾನಿರುವೆ ಎಲ್ಲರ ವಿಶ್ವಾಸದೊಳಗೆ….






wah tumba chenda aagide kannadikarana..ishTa aaytu..:-)
malathi S
Hmmm houdu wajapeyi sir ..ava iruvudu namma nambikeyalli … beligge odi yaako manassige hithavaaythu
ಖಂಡಿತ… ನಮ್ಮನ್ನು ನಾವು ಹುಡುಕಿಕೊಂಡಾಗಲೇ ದೇವರು ಸಿಗುತ್ತಾನೇನೋ…
nija..arthamaadikoLLabekaagide..thanks!!!
Adhbhuthavada salugalu.Nambikeyalle sadhisa bahudada kelasavannu vyartavagi ellello hudukabedi ennuttare mahathmaru .N.Viswanatha
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವ ಪ್ರೀತೀಸ್ನೇಹಗಳ ಗುರುತಿಸದಾದೇನು ನಮ್ಮೊಳಗೆ….ಪದ್ಯ ನೆನಪಾಯ್ತು ಹೌದು ಪ್ರೀತಿ ವಿಶ್ವಾಸವೇ ದೇವರು.. ಥಾಂಕ್ಯೂ ಗೋಪಾಲ್ ಸರ್,
tumba chennagide kavana… vishwasavE devaru…
ಹುಡುಕುತ ಹೋದವರು ತಿರುಗಿ ಬರಲಿಲ್ಲ! ಹುಡುಕಿಸಿಕೊಂಡವನು ಕಾಣಲಿಲ್ಲ! ತಡಪಿ ತಡಪಿ ಹಲುಬಿದವರೇ ನಮ್ಮ ನಿಮ್ಮ ತುಂಬೆಲ್ಲ
Excellent Sir.Such a simple but effective words.
-Rj
ಕ್ರಿಯಾ-ಕರ್ಮದೊಳು ನಾನಿಲ್ಲವಯ್ಯ, ಯೋಗ ಸಂನ್ಯಾಸದೊಳಿಲ್ಲ
ಪ್ರಾಣದೊಳಿಲ್ಲ ನಾ ಪಿಂಡದೊಳಿಲ್ಲ, ಬ್ರಹ್ಮಾಂಡ ಆಕಾಶದೊಳು ಇಲ್ಲ
ಪ್ರಕೃತಿ ಗರ್ಭದಿ ನಾನಿಲ್ಲವಯ್ಯ, ಶ್ವಾಸ ನಿಃಶ್ವಾಸದೊಳು ಇಲ್ಲ
ಹುಡುಕುವವಗೆ ನಾನು ತಕ್ಷಣ ಸಿಗುವೆ ಎಂದಿಗೂ ತಡಮಾಡುವವನಲ್ಲ
Tumbaa ishTa aaytu sir…
i simply enjoyed ur kannada …
anuvada tumba chenda ide sir 🙂
ನನ್ನೊಳಗೆ ನನ್ನನು ಹುಡುಕಬೇಕೀಗ ಊರವರಿಗೆ ಬೆರಳು ತೋರುವ ಮೊದಲು! ಸುಂದರ ಅನುವಾದ ಗೋವಾ ಸರ್!
ಅವತ್ತು ಜೆಪಿ ಮೇಡಮ್ ಮನಿಯೊಳಗ ಈ ಹಾಡು ಧನಂಜಯ್ ಕುಲಕರ್ಣಿ
ಎಷ್ಟು ಸೊಗಸಾಗಿ ಅಂದಿದ್ರಲ್ಲ ಗುರುಗಳ
ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ
ಕುಳಿತರೆ ನಿಲುವ, ನಿಂತರೆ ನಲಿವ,
ನಲಿದರೆ ಒಲಿವೆ ನಿಮಗೆಂಬೀ ಹರಿ ಸುಲಭನೋ
ತನ್ನವರನರಗಳಿಗೆ ಬಿಟ್ಟಗಲನೋ
ರಮಾ ಮಾಧವನನೊಲಿಸರಿಯದೆ
ಬಳಲುವರು ಪಾಮರರು ಜಗದೊಳಗೆ.
ನಮ್ಮ ವಚನ, ದಾಸರ ಪದ, ಕಬೀರ ವಚನಾವಲಿ, ಮರಾಠೀ ಅಭಂಗಗಳು,ಚೌರಾಸೀ ಸಿದ್ಧರ ದೋಹೆಗಳು,ಚೈತನ್ಯನ ಸಹಜೀಯ ಪಂಥದ ಗಾಹೆಗಳು, ಅಣ್ಣಮಾಚಾರ್ಯರ ಹಾಡುಗಳು ಎಷ್ಟೊಂದು ವೈವಿಧ್ಯಮಯವಾಗಿ ಆ ಯುಗದ ಭಾವಗಳನ್ನು ಬಣ್ಣಿಸಿವೆ ?
ತುಂಬಾ ಸರಳವಾದ ಅರ್ಥಗರ್ಭಿತವಾದ ಅನುವಾದ ಸರ್
ಕಬೀರನ ಯೋಚನಾ ಲಹರಿ ಕನ್ನಡದಲ್ಲಿ ಬಂದಿರುವುದು ನಮಗೆಲ್ಲ ಲಾಭ, ಸರ್.
wah tumba chennagide ide rithi halvAru dohe galu irutte. avugalannu kannawakke anuvadha madi