ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದಿಷ್ಟು ಚರ್ಚೆ, ಒಂದಿಷ್ಟು ಸಿನಿಮಾ ಅಪ್ರಿಶಿಯೇಷನ್..

ಸಾಂಗತ್ಯದ 7 ನೇ ಶಿಬಿರದ ಸಿದ್ಧತೆ ಪೂರ್ಣಗೊಂಡಿದೆ. ಜ. 28 ಮತ್ತು 29 ರಂದು ನಾವು ಅಲ್ಲಿರುತ್ತೇವೆ. ಸುಮಾರು 5- 6 ಸಿನಿಮಾಗಳು, ಒಂದಿಷ್ಟು ಚರ್ಚೆ, ಸಿನಿಮಾ ಅಪ್ರಿಶಿಯೇಷನ್ ಕುರಿತಾದ ಉಪನ್ಯಾಸ, ಸಿನಿತಜ್ಞರೊಂದಿಗಿನ ಮುಕ್ತ ಸಂವಾದವೆಲ್ಲವೂ ಇರುತ್ತದೆ. ಪ್ರಯೋಗಾತ್ಮಕ ಚಿತ್ರಗಳಿಂದ ಹಿಡಿದು, ಹಳೆಯ, ಹೊಸತಿನ ಹಾಗೂ ಜನಪ್ರಿಯ ಚಿತ್ರಗಳನ್ನೂ ಆಯ್ಕೆ ಮಾಡಲಾಗುತ್ತಿದೆ. ಒಟ್ಟೂ ಒಂದು ಸಿನಿಮಾವನ್ನ ಕಲೆಯಾಗಿ ನೋಡುವುದು ಹೇಗೆ? ಗ್ರಹಿಸುವುದು ಹೇಗೆ? ಎಂಬುದನ್ನು ಶೋಧಿಸುವ, ಆ ಮೂಲಕ ತಿಳಿಯುವ ಹಂಬಲ ನಮ್ಮದು. ಉಳಿದಂತೆ ಎರಡು ದಿನದಲ್ಲಿ ಆಮಂತ್ರಣ ಪತ್ರಿಕೆ ಸಿದ್ಧವಾಗಲಿದೆ. ಪ್ರವೇಶ ಶುಲ್ಕ 400 ರೂ. ಗಳು. ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ಚಳಿ ಸ್ವಲ್ಪ ಹೆಚ್ಚಿರುವುದರಿಂದ ಸ್ವಲ್ಪ ಬೆಚ್ಚಗಿಡುವ ಉಡುಪು (ಸ್ವೆಟರ್, ಟೊಪ್ಪಿ ಇತ್ಯಾದಿ) ತರಬಹುದು. ಕುಪ್ಪಳಿಗೆ ಬರುವವರಿಗೆ ಮಾರ್ಗಸೂಚಿ ಬೆಂಗಳೂರಿನಿಂದ ಹೊರಡುವವರು ಪ್ರತಿ ದಿನ ರಾತ್ರಿ 10. 30 ಗೆ ಮೆಜೆಸ್ಟಿಕ್ ನಿಂದ ಕುಪ್ಪಳಿಗೇ ಬಸ್ ಇದೆ. ಅದನ್ನು ಬಿಟ್ಟರೆ ಶಿವಮೊಗ್ಗಕ್ಕೆ ಬಂದು ತೀರ್ಥಹಳ್ಳಿ ಬಸ್ಸನ್ನು ಹತ್ತಬೇಕು. ತೀರ್ಥಹಳ್ಳಿಯಿಂದ ಕೊಪ್ಪದ ಬಸ್ ಹತ್ತಿ ಗಡಿಕಲ್ಲು ಎಂಬಲ್ಲಿ ಇಳಿದು ಬರಬೇಕು, ಗಡಿಕಲ್ಲಿಗಿಂತ ಸ್ವಲ್ಪ ಮೊದಲೇ ಕುಪ್ಪಳಿ-ಕುವೆಂಪು ಮನೆಗೆ ಹೋಗಬೇಕೆಂದರೆ ನಿಲ್ಲಿಸುತ್ತಾರೆ-ಅಲ್ಲಿಳಿದು ಮೂರು ನಿಮಿಷ ನಡೆದರೆ ಕಾರ್ಯಕ್ರಮದ ಸ್ಥಳ ಸಿಗುತ್ತದೆ. ಬೆಂಗಳೂರು-ಮೈಸೂರಿನಿಂದ ಶಿವಮೊಗ್ಗಕ್ಕೆ ಬಂದು ಬರುವವರಿಗೆ ರಾತ್ರಿ ರೈಲೂ ಇದೆ. ತೀರ್ಥಹಳ್ಳಿಗೆ ಬಂದು ಬರಬೇಕಾಗಿರುವುದರಿಂದ ರಾತ್ರಿ ಸ್ವಲ್ಪ ಬೇಗ ಹೊರಡಿ. ಮಂಗಳೂರು-ಕುಂದಾಪುರ ಕಡೆಯಿಂದ ಬರುವವರಿಗೆ ಉಡುಪಿಯಿಂದ ಭದ್ರಾವತಿ ಬಸ್ಸನ್ನ ಹತ್ತಿ ಕೊಪ್ಪದಲ್ಲಿಳಿದು, ತೀರ್ಥಹಳ್ಳಿ ಬಸ್ಸನ್ನು ಹತ್ತಿ ಗಡಿಕಲ್ಲು ಎಂಬಲ್ಲೇ ಇಳಿದು ಬರಬೇಕು. ಬಳ್ಳಾರಿ, ಬೀದರ್ ಇತ್ಯಾದಿ ಕಡೆಯಿಂದ ಬರುವವರು ಶಿವಮೊಗ್ಗಕ್ಕೆ ಬಂದೇ ಬರಬೇಕು. ಗೊಂದಲವಾದರೆ 99804 57812, 94807 97113, 94482 45172 ಕ್ಕೆ ಸಂಪರ್ಕಿಸಿ.  ]]>

‍ಲೇಖಕರು G

22 January, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading