ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂಟಿ ಬತ್ತಿಯ ಹಣತೆ ಸಣ್ಣಗೆ ಉರಿಯುತ್ತದೆ..

ಬಿ ವಿ ಭಾರತಿ 

ಸಾವಿನ ಮನೆಯಲ್ಲಿ
ದೇಹವಿದ್ದ ತಾವಲ್ಲಿ
ಒಂಟಿ ಬತ್ತಿಯ ಹಣತೆ
ಸಣ್ಣಗೆ ಉರಿಯುತ್ತದೆ,
ಹಗಲಿನಲ್ಲೂ, ರಾತ್ರಿಯಲ್ಲೂ
ಸಾವನ್ನು ಮರೆಯಲು ಬಿಡದೇ

ಎಣ್ಣೆಯೂಡುತ್ತಲೇ ಇರಬೇಕು,
ಬದುಕಿಗಾಗುವುದು ಹಾಗಿರಲಿ
ನಡುರಾತ್ರಿಯಲ್ಲಿ ಎಚ್ಚರವಾದರೆ
ಪರಿಚಿತ ಮನೆಯ ಬಚ್ಚಲಿಗೂ
ಹಾದಿ ತೋರದ ತಬ್ಬಲಿ ಮಬ್ಬು ಬೆಳಕದು
ಆದರೂ ದೀಪವಿರಬೇಕು ನೆಪಕ್ಕೆ

ನಿಷ್ಕರುಣಿ ಸಾವಷ್ಟೇ ಸತ್ಯ,
ಹತ್ತನೆಯ ದಿನಕ್ಕದು ಎದೆಗೆ ವೇದ್ಯ-
ವಾದಾಗ ಒಂಟಿ ಬತ್ತಿಗೆ ಮುಕ್ತಿ,
ಕೊನೆಗೆ ಉಳಿವುದು ಅದೇ
ಆತ್ಮದ ಅಮರತ್ವದ ಸುಳ್ಳು,
ಪುನರ್ಜನ್ಮದ ಕನವರಿಕೆ
ಜೊತೆಗಿಷ್ಟು ಹಾಗೆ ಮಾಡಿದ್ದರೆ, ಹೀಗಾಗಿದ್ದರೆ
ಎನುವ ಹಳಹಳಿಕೆ ….

ಸಾವೆಂದರೆ ಕತ್ತಲು
ಸಾವೆಂದರೆ ಪ್ರಶ್ನೆ
ಸಾವೆಂದರೆ ಸಾವು,
ಸಾವೆಂದರೆ ಹೊಸತರ ಹುಟ್ಟು ಕೂಡಾ ಇರಬಹುದೇ ….?

‍ಲೇಖಕರು Admin

20 September, 2016

3 Comments

  1. Shama, Nandibetta

    ನಿಜ ಕಣೇ, ಕೆಲವು ಸಾವುಗಳನ್ನ ಮರೆಯುವುದು ಕಷ್ಟ ಮಾತ್ರವಲ್ಲ, ಸಾಧ್ಯವೇ ಇಲ್ಲ

    • ಭಾರತಿ ಬಿ ವಿ

      ಅಲ್ವಾ 🙁 🙁

  2. samyuktha

    🙁

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading