ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲ ಚಳವಳಿಗಳ ಮೊದಲನೇ ಮಹಿಳೆ

 
ಪೊನ್ನಮ್ಮಾಳ್ ಎಂಬ ಸಮಾಜವಾದೀ ದೇವತೆ

ಶಿವಮೊಗ್ಗದ ಸಮಾಜವಾದೀ ಕುಟುಂಬದಲ್ಲಿ ಕೆಲವರಿಗೆ ಅಕ್ಕನಂತೆಯೂ ನಮ್ಮಂಥ ಎಳೆಯರಿಗೆ ತಾಯಿಯಂತೆಯೂ ಇದ್ದ ಪೊನ್ನಮ್ಮಾಳ್ ನಿಧನ ನನ್ನ ಮಟ್ಟಿಗೆ ಅತೀವ ದುಃಖದ ಸಂಗತಿ. 
ನಮ್ಮ ಎಲ್ಲ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದ ಮೊದಲನೇ ಮಹಿಳೆಯೆಂದರೆ ಪೊನ್ನಮ್ಮಾಳ್. ಚಳವಳಿಗಳಲ್ಲಿ ಮಾತ್ರವಲ್ಲ ನಮ್ಮ ಗಾಢವಾದ ತಾತ್ವಿಕ ಚರ್ಚೆಯಲ್ಲೂ ಅವರು ಪಾಲುದಾರರು. ಆದರೆ ಸ್ವಂತದ್ದಾದ ಯಾವ ರಾಜಕೀಯ ಆಸೆಯೂ ಅವರಿಗಿರಲಿಲ್ಲ. ಕನ್ನಡದ ಅನೇಕ ಮಹತ್ವದ ಲೇಖಕರಂತೆಯೇ ಪೊನ್ನಮ್ಮಾಳ್ ಮನೆಯಲ್ಲಿ ಕನ್ನಡ ಮಾತನಾಡದಿದ್ದರೂ ಸಂಪೂರ್ಣ ಕನ್ನಡಿಗರೇ ಆಗಿದ್ದವರು. ನಮಗೆ ಯಾರು ಯಾವ ಜಾತಿ ಇತ್ಯಾದಿ ಕುತೂಹಲಗಳೂ ಇಲ್ಲದಿದ್ದಾಲದಲ್ಲಿ ಪೊನ್ನಮ್ಮಾಳ್ ನಮ್ಮವರಾದರು.
 
ಸಂಪೂರ್ಣ ಓದಿಗೆ ಭೇಟಿ ಕೊಡಿ: ಋಜುವಾತು 
 
+++
 

ಗುಲಾಬಿ ಟಾಕೀಸಿಗೆ ಒಂದ್ಸಲ ಹೋಯ್ ಬಪ್ರ್ಯಲ…

ಅಂತೂ ಕಳ್ದ್ ವಾರ ಪಿ.ವಿ.ಆರ್ ಟಾಕೀಸಿಗ್ ಹೋಯಿ ಗುಲಾಬಿ ಟಾಕೀಸ್ ಕಂಡ್ಕಂಡ್ ಬಂದೆ. ವೈದೇಹಿ ಬರದ್ ಕತಿದ್ ಒಂದ್ ಸಣ್ಣ್ ಎಳಿ ಮಾತ್ರ ಇಟ್ಕಂಡಿರ್. ಕತಿ ಬದ್ಲ್ ಮಾಡ್ರೂ ಪಿಚ್ಚರ್ ಭಾರಿ ಲಾಯ್ಕ್ ಆಯಿ ಬಂದಿತ್. ಉಮಾಶ್ರೀಯಂತೂ ಕುಂದಾಪ್ರ್ ಬದ್ಯರ್ ಅಲ್ಲ ಅಂದೇಳಿ ಹೇಳುಕ್ ಯಡ್ಯ. ಹಾಂಗ್ ಕಾಂಬುಕ್ ಹೋರೆ ಎಂ.ಡಿ.ಪಲ್ಲವಿ ಮಾಡದ್ ನೇತ್ರ ಕುಂದಾಪ್ರ ಕನ್ನಡ ಮಾತಾಡ್ವತಿಗೆ ಒಂಚೂರ್ ಬೇರೆ ನಮ್ನಿ ಕೇಂತಿತ್ತ್. ಆರ್ ಇದೆಲ್ಲ ಅಷ್ಟ್ ದೊಡ್ ತಪ್ಪೇನಲ್ಲ ಬಿಡಿ. ನಾವ್ ಹುಟ್ಟಿನ್ ಲಗಾಯ್ತ್ ಊರಗೇ ಇದ್ದದ್. ಈಗೊಂದ್ ನಾಲ್ಕಾರ್ ವರ್ಷದ್ ಈಚಿಗೆ ಊರ್ ಬಿಟ್ಟದ್. ಆರೂ ಮಾತಾಡ್ವತಿಗೆ ಬ್ಯಾಡ ಅಂದ್ರೂ ಈ ಬದಿ ಕನ್ನಡ ಎಷ್ಟೋ ಸಲ ಎಳಿತ್ತ್. ಇನ್ ಅವ್ರ ನಾಕ್ ದಿನ್‌ದಗೆ ಅಷ್ಟಪ ಕಲ್ತ್ ಮಾತಾಡುದೇ ಹೆಚ್ಚ್…
ಸಂಪೂರ್ಣ ಓದಿಗೆ ಭೇಟಿ ಕೊಡಿ: ಕುಂದಾಪ್ರ ಕನ್ನಡ

‍ಲೇಖಕರು avadhi

24 October, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading