-ಧೀರೇಂದ್ರ ನಾಗರಹಳ್ಳಿ
ಗ್ರಹಣವೂ ಕರಗಲಿದೆ
ಹೀಗೆ ಹೇಳಿದರೆ ಅದೊಂದು
ಜ್ಯೋತಿಷ್ಯದ ಭವಿಷ್ಯವಲ್ಲ
ಹೃದಯಾಳದಲ್ಲಿ ಮೊಳೆತಿರುವ ಕನಸಿನ ಧ್ವನಿ-
ಇನ್ನೆಲ್ಲವೂ ಕೊನೆಯಾಗಲಿದೆ: ಗ್ರಹಣವೂ ಕರಗಲಿದೆ!
ನಮ್ಮ ಹೆಜ್ಜೆಗಳಲ್ಲಿನ ನಂಜು-
ಉಸರಿನಲ್ಲಿರುವ ಬೆಂಕಿ
ನೋಟದೊಳಗಿನ ಧಗೆ
ಎಲ್ಲವೂ ಒಟ್ಟಾಗಿ ಉಸಿರಾಗದ
ಧಗೆಯಾಗಿ : ಪ್ರಯಳವಾಗಿ ಮನುಕುಲವು
ಆಳಿದಮೇಲೆ, ಇನ್ನೇನು ಉಳಿಯಲಿದೆ?
ಎಲ್ಲವೂ ಅಂತ್ಯವಾಗಲಿದೆ.
ಆ ಅಂತ್ಯವೂ ಒಂದು ಆರಂಭವಾಗಲಿದೆ
ಮನುಷ್ಯತ್ವವೆ ಇರದ ಆ ಲೋಕದಲ್ಲಿ
ದೈವತ್ವವೆ ಎಲ್ಲೆಲ್ಲೂ ಕಾಣಲಿದೆ
ಹೊಸ ಬೆಳಕೊಂದು ಹರಿಯಲಿದೆ.
ಹೊಸದಾರಿ ಕಾಣಲಿದೆ.
ಹೀಗೆಯೆ ನಾವೆಲ್ಲಾ –
ಅಳಿದೆ ಮೇಲೆ ಉಳಿಯುವುದೇನಿದೆ.
ಮತ್ತೆ ಜಗದಾದಿಯಾಗಿ
ಹೊಸ ಉಗಮವಾಗಿ
ದೇವರು ಮನುಷ್ಯರನ್ನು ಸೃಷ್ಟಿಸಲಿದ್ದಾನೆ.
ಮನುಷ್ಯರೆಲ್ಲರ ಮನಸ್ಸಲ್ಲಿ
ದೇವರು ಕೂರಲಿದ್ದಾನೆ.
ಮನುಷ್ಯರೆಲ್ಲರೂ ದೇವರಂತಾಗಲಿದ್ದಾರೆ.
ಒಂದು ಹೊಸ ಹಾಡು ,ಹೊಸ ನಾಡು
ಹೊಸ ಜಾಡು ಕಾಣಲಿದೆ.
ಇನ್ನೆಲ್ಲವೂ ಕೊನೆಯಾಗಲಿದೆ..
ಗ್ರಹಣವೂ ಕರಗಲಿದೆ.






0 Comments