ಸದಾ ಹಾಡು ಗುಂಯ್ ಗುಡುವ ಗೋಪಾಲ ವಾಜಪೇಯಿ ಅವರ ಮನಸ್ಸು ತನ್ನ ಕೆಟ್ಟು ಹೋದ ಮೊಬೈಲ್ ಗೆ ಪ್ರತಿಕ್ರಿಯಿಸಿದ್ದು ಹೇಗೆ ?
ಗೋಪಾಲ ವಾಜಪೇಯಿ
ಗಂಟೆ ಹೊಡೆದು ಮಾತಿಗೆ ಶುರುವಿಟ್ಟುಕೊಳ್ಳುತ್ತಿದ್ದ ನನ್ನ ‘ಜಂಗಮ ವಾಣಿ’ಗೆ ಅದೇನು ಜಂಬವೋ… ವಾರದಿಂದ ಮಾತು ನಿಲ್ಲಿಸಿದೆ.
‘ಏನಂಥ ಮುನಿಸು ಮರಿಯೆ…
ಮಾತನ್ನ ಮರೆತೇ ಸರಿಯೆ?’
– ಅಂತ ಎಷ್ಟೇ ಅನುನಯದಿಂದ ಕೇಳಿದರೂ ಅದರ ಮನಸು ಕರಗಲೊಲ್ಲದು, ನಾನೇ ಮೈದಡವಿ ಮಾತಾಡಿಸಿದರೂ ಮಿಸುಕಲೊಲ್ಲದು… ಅದರ ಕೋಪ ನನ್ನ ಮೇಲೆ ಮಾತ್ರ.
ಅದಕ್ಕೇ, (ನಾನು) ನಿಮ್ಮೊಂದಿಗೆ ಮಾತಾಡಲು ಸಹಕರಿಸುತ್ತಿಲ್ಲ ; ನೀವು ಮಾತಾಡಿದರೆ ಗಂಟೆ ಹೊಡೆದು ಕರೆಯುತ್ತಾಳೆ.
ಇನ್ನೆರಡು ದಿನ ವಾಯಿದೆ ಕೊಡುತ್ತೇನೆ ; ಆಗಲೂ ಮೊಂಡಾಟ ಮುಂದುವರಿದರೆ ಬಲ್ಲವರಿಂದ ‘ಮೆಣಸು ಅರೆಸು’ತ್ತೇನೆ…
ಸದ್ಯ ನಾನಂತೂ ಹೀಗೆ ಹಾಡಿಕೊಳ್ಳುತ್ತಿದ್ದೇನೆ :
ಅವಧಿಗೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ….ಗೋಪಾಲ್ ವಾಜಪೇಯಿ ಅವರ ವ್ಯಕ್ತಿತ್ವದ ಪೂರ್ಣಪರಿಚಯ ಖಂಡಿತಾ ನನಗಿರಲಿಲ್ಲ..ಮೊಗೆದಷ್ಟೂ ಸಾಗರದ ನೀರು ಆಳ , ವಿಸ್ತಾರ ಎನ್ನುವಂತೆ ನಿನ್ನೆಯಿಂದ ಅವರ ಬಗೆಗಿನ ಏಲ್ಲ ಲೇಖನಗಳನ್ನೂ ಬಿಟ್ಟೂಬಿಡದೆ ಓದುತ್ತಿರುವೆ. ಕಣ್ಣಿರುಕ್ಕುವುದು, ಖುಶಿಯಾಗುವುದು, ಬೆರಗಾಗುವುದು, ….ಅಯ್ಯೋ, ಒಮ್ಮೆಯು ಈ ಮಹಾತ್ಮನನ್ನು ನೋಡಲೇ ಇಲ್ಲವಲ್ಲ, ಕಾಲ ಜಾರಿಯೇ ಬಿಟ್ಟಿತಲ್ಲ ಎನ್ನೋ ವಿಷಾದ ಉಳಿದುಬಿಡುವುದು…..ಹಿಂದೊಮ್ಮೆ ” ಚಿ.ಶ್ರೀನಿವಾಸರಾಜು” ಅವರ ಅಂತ್ಯದಲ್ಲೂ ಇದೇ ಭಾವ ಕಾಡಿತ್ತು….
ಗೋಪಾಲ ವಾಜಪೇಯಿಯವರ ಬದುಕನ್ನು ಈಗ ಓದಿ ಕೃತಾರ್ಥಳಾಗುತ್ತಿರುವೆ…..