ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್ ಅವರನ್ನು ’ಅವಧಿ’ಯ ಪ್ರತಿನಿಧಿ ಅಲ್ಲಾಬಕ್ಷಿ ಅವರು ನಿಮ್ಮನ್ನು ಕಾಡುವ ಸಿನಿಮಾ ಯಾವುದು ಎಂದು ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ.
ರೋಶಮನ್ ನನ್ನನ್ನು ಕಾಡುವ ಚಿತ್ರ.

ಈ ಚಿತ್ರದಲ್ಲಿ ಕೊಲೆಯಾಗಿರುವದು ಒಬ್ಬ, ಆದರೆ ಆ ಕೊಲೆಯನ್ನು ಒಬ್ಬೊಬ್ಬರು ಒಂದೊಂದು ದೃಷ್ಟಿಕೋನದಿಂದ ಬಣ್ಣಿಸುತ್ತಾರೆ, ಬೇರೆ ಬೇರೆ, ಪರಸ್ಪರ ವಿರುದ್ಧದ ಕಾರಣ ಕೊಡುತ್ತಾರೆ. ನೋಡುವವನ ದೃಷ್ಟಿ ಕೋನದ ಮೇಲೆ ಕಥೆ ನಿಲ್ಲುತ್ತದೆ ಎನ್ನುವುದನ್ನು ಅಕಿರೋ ಕುರಾಸೋವ ಅದ್ಭುತವಾಗಿ ಚಿತ್ರಿಸಿದ್ದಾರೆ. ಆ ಚಿತ್ರದಲ್ಲಿ ಕಲೆಯ ಮೌಲ್ಯ ತುಂಬಾ ಅಡಗಿದೆ. ಹಾಗಾಗಿ ನನಗದು ಕಾಡುವ ಚಿತ್ರ. ಯಾವುದೆ ಒಂದು ಚಿತ್ರ ಮಾನವೀಯ ಸಮಸ್ಯೆಗಳಿಗೆ ಹೇಗೆ ಧನಾತ್ಮಕವಾಗಿ ಪರಿಹಾರ ಕಂಡು ಕೊಳ್ಳಬಹುದು ಎನ್ನುವುದನ್ನು ತೋರಿಸಿದರೆ ಅದು ಪ್ರಶಂಸನೀಯ. ಅದು ಈ ಚಿತ್ರದಲ್ಲಿದೆ.
ಇನ್ನು ಕನ್ನಡದಲ್ಲಿ ನನ್ನನ್ನು ಕಾಡುವ ಚಿತ್ರ ಬಂಗಾರದ ಮನುಷ್ಯ.

ಒಬ್ಬ ಯುವಕ ಒಂದು ಹಳ್ಳಿಯನ್ನು ಹೇಗೆ ಬದಲಾವಣೆ ಮಾಡಬಹುದು ಎಂಬುದು ಆ ಚಿತ್ರದಲ್ಲಿ ಬಹಳ ಅರ್ಥಗರ್ಭಿತವಾಗಿ, ಮನಮುಟ್ಟುವಂತೆ ಚಿತ್ರೀಕರಣಗೊಂಡಿದೆ.



0 Comments