ಉದಯ ಗಾಂವಕಾರ
ಆನಂತರ ಎಲ್ಲವೂ
ಯಥಾಪ್ರಕಾರ ನಡೆಯಲಿಲ್ಲ.
ಏನೂ ನಡದೇ ಇಲ್ಲವೆಂಬಂತೆ
ಅಲ್ಲಿದ್ದವರೆಲ್ಲ ತಮ್ಮ ತಮ್ಮ
ಕೆಲಸಗಳಲ್ಲಿ ನಿರತರಾದದ್ದು ಹೌದು;
ಅಲ್ಲವೆನ್ನುವುದಿಲ್ಲ.
ಅವರು ಗಮನಿಸಿದರೋ ಇಲ್ಲವೋ?
ನುಜ್ಜು ಗುಜ್ಜಾದ ಹಣ್ಣಿನ
ಚೂರಲ್ಲಿ ಸಿಹಿ ಹುಡುಕಿ
ಸಾಲಾಗಿ ಬಂದ ಇರುವೆಗಳು
ಇದೇ ಮೊದಲ ಸಲ
ಹಸಿದು ಮರಳಿದವು..
ಆಸೆಯಿಂದ ಬಾಯಿಟ್ಟ
ಸರತಿಯ ಮೊದಲ ಇರುವೆಯ ಸಂದೇಶ
ಇಡಿಯ ಸಂಕುಲಕ್ಕೇ ರವಾನೆಯಾಯ್ತು.
ಹೌದು, ಹಣ್ಣು ಉಪ್ಪಾಗಿತ್ತು.
*
ಆತನ ಕಣ್ಣೀರಿನಲ್ಲಿ
ಕರಗದೇ ಇರುವುದು ಎರಡೇ-
ದ್ವೇಷ ಮತ್ತು ಹಿಂಸೆ.
ತುಂಬಾ ಚೆನ್ನಾಗಿದೆ. ನನಗೆ ನಿಮ್ಮ ಕವನಗಳು ಇಷ್ಟ. ಅದರ ಶೈಲಿ ಬಂಧ ಪದ ಬಳಕೆ ವಸ್ತು ಎಲ್ಲವೂ ಶುದ್ಧ ಕಾವ್ಯ. ಹಿಂತಿರುಗಿ ಬಂದಳು… (“ಮುಟ್ಟಿರದ ಯೋನಿಯಿಂದ ಹುಟ್ಟಿರುವವನನ್ನುಹುಡುಕಿಕೊಡು ಎಂದಳು”) ಒಂದು ಕಾಡುವ ಉದ್ಯಾನ…(ಹೂ-ಗಿಡಗಳ ಅಂಗಡಿಯಲ್ಲಿ
ಕತ್ತರಿಯೂ ಮಾರಾಟಕ್ಕಿರುತ್ತದೆ; ತೊಟ್ಟಿಲಂಗಡಿಯಲ್ಲಿ ಬೊಂಬು ಸಿಗುವಂತೆ!) ಯಥಾಪ್ರಕಾರ ನಡೆಯಲಿಲ್ಲ, ಕರೋನಾ ಚೂರ್ಗತೆಗಳು… ಎಲ್ಲಾ ಚೆನ್ನಾಗಿವೆ. ಥ್ಯಾಂಕ್ಸ್.
ಪ್ರತಿಭಾ ನಂದಕುಮಾರ್