ಉಣ್ಣುವವರ ಸಾಲಲ್ಲಿ ನುಂಗುವವರ ಕಂಡು, ದೇವರಿಗೆ ಭಯ ಶುರುವಾಗಿತ್ತು.

ಚಿದಂಬರ ನರೇಂದ್ರ 

ಅಂಗಳದಲ್ಲಿ ಬಂದಿಳಿದ ಭಕ್ತರ ದಂಡು, ವಿಮಾನ ಕಂಡು, ದೇವರಿಗೆ ಭಯ ಶುರುವಾಗಿತ್ತು.
ಜೊತೆಗೆ ಬಂದ ಹೆಜ್ಜೆಗಳ ರಕ್ತದ ಓಕಳಿ ರಂಗನ್ನು ಕಂಡು, ದೇವರಿಗೆ ಭಯ ಶುರುವಾಗಿತ್ತು.

ಹಸಿದು ಬಂದವರನ್ನು ಸಂತೈಸುವುದು ದೇವರ ಕೆಲಸ, ಅದು ದೇವರಿಗೂ ಗೊತ್ತು
ಉಣ್ಣುವವರ ಸಾಲಲ್ಲಿ ನುಂಗುವವರ ಕಂಡು, ದೇವರಿಗೆ ಭಯ ಶುರುವಾಗಿತ್ತು.

ಉಪವಾಸಕ್ಕೊಂದು ಘನತೆ ತಂದುಕೊಟ್ಟವ ಓಡಾಡಿದ ನೆಲದಲ್ಲಿ
ಬಹುಜನರ ಊಟ ಹೇಸಿಗೆ ಎನ್ನುವವ ಕೈ ಮುಗಿದು ನಿಂತದ್ದನ್ನು ಕಂಡು, ದೇವರಿಗೆ ಭಯ ಶುರುವಾಗಿತ್ತು.

ಮೈತುಂಬ ಸೂಟು ಜನಸೇವೆಗಾಗಿ ಎನ್ನುವ ದೇಶಭಕ್ತರು
ತನ್ನ ಮುಂದೆ ಬೆತ್ತಲಾಗಿ ರಾಜಕಾರಣ ಮಾಡುವುದ ಕಂಡು, ದೇವರಿಗೆ ಭಯ ಶುರುವಾಗಿತ್ತು.

ದೇವರಿದ್ದಾನೋ, ಇಲ್ಲವೋ ಎಂಬ ಸತ್ಯ, ದೇವರಿಗೇ ಗೊತ್ತು
ಜಂಗಮನಿಗೊಂದು ಗುಡಿ ಕಟ್ಟುವ ಜನರ ಸೋಗಲಾಡಿತನ ಕಂಡು ದೇವರಿಗೆ ಭಯ ಶುರುವಾಗಿತ್ತು.

‍ಲೇಖಕರು avadhi

April 14, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Anasuya M R

    ವಾಸ್ತವಿಕತೆಗೆ ಹಿಡಿದ ಕೈಗನ್ನಡಿಯಾಗಿದೆ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Suma KBCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: