ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಈಗ"- ಈಗ್ಲೆ ಅಲ್ಲಾಂದ್ರೂ ನೋಡ್ದೆ ಇರ್ಬೇಡಿ!

“ಈಗ”- ಈಗ್ಲೆ ಅಲ್ಲಾಂದ್ರೂ ನೋಡ್ದೆ ಇರ್ಬೇಡಿ. – ರಾಘವೇ೦ದ್ರ ತೆಕ್ಕಾರ್ “ಈಗ” ನೊಣವೆ ಹೀರೋ ಆಗಿ ಕಾಣಿಸಿಕೊಂಡ ಚಿತ್ರ ಭರ್ಜರಿ ಯಶಸ್ಸಿನೊಂದಿಗೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸು ಸೂಕ್ತವಾಗಿದೆ ಮತ್ತು ಒಂದದ್ಬುತ ಪರಿಕಲ್ಪನೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯೂ ಹೌದು.ರಾಜಮೌಳಿಯವರ ಎಲ್ಲಾ ಹಿಂದಿನ ಯಶಸ್ವಿ ಚಿತ್ರಗಳನ್ನೆಲ್ಲ ಮೀರಿಸಿ ಈ ಚಿತ್ರ ನಿಂತಿದೆ ಅಂದರೂ ಅತಿಶಯೋಕ್ತಿಯಲ್ಲ.ಒಂದರೆಕ್ಷಣವೂ ಪ್ರೇಕ್ಷಕನ ಚಿತ್ತ ಚಿತ್ರದಿಂದ ದೂರ ಸರಿಯದಂತೆ ಹಿಡಿದಿಡುವ ರಾಜಮೌಳಿಯ ಗಟ್ಟಿ ನಿರ್ದೇಶನ, ಸುದೀಪ್ ರ ಪೂರ್ಣ ಪ್ರಮಾಣದ ಅದ್ಬುತ ಅಭಿನಯ, ಅತ್ಯದ್ಭುತ ಗ್ರಾಫಿಕ್ ತಂತ್ರಜ್ಞಾನದ ಬಳಕೆ,ಕೀರವಾಣಿಯವರ ಉತ್ತಮ ಸಂಗೀತ, “ಈಗ”ವನ್ನೂ ಶ್ರೀಮಂತಗೊಳಿಸಿದೆ. ಎಲ್ಲೂ ಅನಾವಶ್ಯಕವಾಗಿ ಎಳೆದುಕೊಳ್ಳದೆ, ಕಥೆಗೆ ಎಷ್ಟು ಬೇಕೋ ಅಷ್ಟಷ್ಟೆ ಸೂಕ್ತವೆನಿಸುವ ದೃಶ್ಯ ಸಂಯೋಜನೆಯೊಂದಿಗೆ ಎರಡೇ ಎರಡೂ ಉತ್ತಮ ದೃಶ್ಯ ಪರಿಕಲ್ಪನೆಯ ಜೊತೆಗಿರುವ ಹಾಡೂಗಳೊಂದಿಗೆ ಈ ಚಿತ್ರವೂ 2 ಘಂಟೆಯ ಸಮಯದಲ್ಲಿ ಉತ್ತಮ ಮನರಂಜನೆ ಸವಿಯನ್ನು ಕೊಡುವದೂ ಖಂಡಿತಾ ಮತ್ತೂ ಈ ಸವಿ ಬಹುದಿನದ ಮಟ್ಟಿಗೆ ಉಳಿದುಕೊಳ್ಳುವದೂ ಕೂಡ ಸತ್ಯ. ಸುದೀಪ್ ಪೂರ್ಣ ಪ್ರಮಾಣದ, ಬಹುಶಃ ಹಿಂದಿನೆಲ್ಲಾ ಚಿತ್ರದ ಅಭಿನಯವನ್ನೂ ಮೀರಿಸಿದ ಅಭಿನಯ ಈ ಚಿತ್ರದಲ್ಲಿ ಬಂದಿದೆ ಎಂಬುದು ಚಿತ್ರ ನೋಡುಗ ಕಾಣುತ್ತಲೆ ಸುದೀಪ್ ರನ್ನೂ ಅರ್ಥೈಸಿಕೊಂಡು ರಾಜ್ ಮೌಳಿ ಸುದೀಪರನ್ನೂ ಈ ಮಟ್ಟಿಗೆ ಬಳಸಿಕೊಂಡಿರೋದು ಕೂಡ ಚಿತ್ರ ನೋಡಿ ಮುಗಿಸಿದ ಪ್ರೇಕ್ಷಕ ಮೆಚ್ಚುವ ಅಂಶಗಳಲ್ಲೊಂದು. ಇತ್ತೀಚೆಗೆ ಕನ್ನಡದ ಒಂದು ಸಂಘಟನೆ ಸುದೀಪ್ ರಿಗೆ ‘ಅಭಿನವ ಚಕ್ರವರ್ತಿ’ ಬಿರುದನ್ನೂ ಕೊಟ್ಟಿದ್ದೂ ನೆನಪಾಗಿ ಈ ಬಿರುದಿಗೆ ಸುದೀಪ್ ಸೂಕ್ತವಾದ ವ್ಯಕ್ತಿ ಹೌದೆನ್ನುವ ಅನುಮೋದನೆಯನ್ನೂ ಚಿತ್ರ ನೋಡಿದ ಪ್ರೇಕ್ಷಕನಲ್ಲಿ ಈ ಚಿತ್ರದ ಸುದೀಪ್ ಪಾತ್ರ ಮೂಡಿಸುತ್ತದೆ. ಕನ್ನಡದಲ್ಲೆ ಭಾಷೆಯಲ್ಲೆ ಪ್ರಾರಂಭವಾಗುವ ಚಿತ್ರ ಪ್ರಾರಂಭದಲ್ಲೆ ಪ್ರೇಕ್ಷಕನನ್ನೂ ಚಿತ್ರದತ್ತ ಸೆಳೆದು ಬಿಡುತ್ತೆ, ತದ ನಂತರ ಪ್ರೇಕ್ಷಕನ ಚಿತ್ತವೆಲ್ಲ ಚಿತ್ರದಲ್ಲೆ ತೊಡಗಿ ಬಣ್ಣದ ಚಿತ್ತಾರವ ಕಣ್ಣು ತುಂಬಿಕೊಳ್ಳುವಂತೆ ಮಾಡುತ್ತದೆ.ರಾಜ್ ಮೌಳಿಯವರ ಈ ವಿಶಿಷ್ಟ ಪರಿಕಲ್ಪನೆಯನ್ನೂ ಯಾವೂದೇ ಹಾಲಿವುಡ್ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ನೋಡಿ ತನ್ನದಾಗಿಸಿಕೊಳ್ಳುವ ಅವಕಾಶವನ್ನೂ ಮಿಸ್ ಮಾಡ್ಕೊಳ್ಳದೆ ಇರುವದು ಉತ್ತಮ ಎಂಬುದನ್ನು ತಿಳಿಯಪಡಿಸುವದಕ್ಕಾಗಿ ಹಿಂಗೊಂದು ಬರಹ. ಡೈನೋಸಾರ್ , ಆನಕೊಂಡ, ಆನೆ, ಹುಲಿ, ಸಿಂಹ, ಇಲಿ, ಮೊಲ, ನಾಯಿ ಇಂಥಹ ಪ್ರಾಣಿಗಳನ್ನೆಲ್ಲಾ ಬಳಸಿಕೊಂಡು ಚಿತ್ರಗಳೂ ಮೂಡಿಬಂದಿದ್ದು ನಾವೂ ನೋಡಿರುವಂತದ್ದೆ. ಬಹುಶಃ ಮೊದಲ ಭಾರಿಗೆ ಒಂದೆ ಚಪ್ಪಾಳೆ ಏಟಿಗೆ ಹೊಸಕಿ ಬಿಡಬಹುದಾದ, ಬರೀಯ ಕಣ್ಣ ದೃಷ್ಟಿಯ ಗಮನಕ್ಕೂ ಗಮನಿಸದ ಹೊರತಾಗಿ ಬರದ ನೊಣವೊಂದು ಚಿತ್ರದ ಹೀರೋವಾಗಿ ಕಾಣಿಸಿಕೊಂಡು ವಿಲನ್ ಮೇಲೆ ರಿವೇಂಜ್ ತೀರಿಸುವಂತ ಪರಿಕಲ್ಪನೆ ಹೇಗಿದ್ದೀತೂ???ಹೇಗೆ ನೊಣವೊಂದು ಸಂಭಾಷಿಸಬಹುದು?? ನೊಣವೊಂದು ಏನು ಮಹಾ ಕಾಟ ಕೊಡಲು ಸಾಧ್ಯ?? ಇಂತಹ ಕುತೂಹಲಗಳೆ “ಈಗ” ಚಿತ್ರದತ್ತ ಆ ಮೂಲಕ ಚಿತ್ರಮಂದಿರದತ್ತ ನನ್ನ ಸೆಳೆದಿದ್ದು.ನನ್ನೆಲ್ಲ ಕುತೂಹಲದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರವಂತೂ ಅದ್ಬುತ.ನೊಣವೆ ಹಾಸ್ಯ ಪಾತ್ರವಾಗಿ ಪ್ರೇಕ್ಷಕನನ್ನೂ ನಕ್ಕೂ ನಗಿಸಲೂಬಹುದೂ ಎಂಬುದೂ ಕೂಡ ಕಂಡುಕೊಂಡಾಗ ರಾಜಮೌಳಿಯ ನಿರ್ದೇಶನಕ್ಕೆ ಮನಸ್ಸಲ್ಲೆ ಒಂದು ಶಭಾಸ್ ಅಂದಿದ್ದೆ.ಇಂತದ್ದೊಂದು ಕಾನ್ಸೆಪ್ಟ್ ಹುಟ್ಟಿಸಿ ಅದಕ್ಕೆ ಸುದೀಪ್ ಸೂಕ್ತ ನಟ ಎಂಬುದಾಗಿ ರಾಜಮೌಳಿ ಆರಿಸಿದ್ದನ್ನ ನೋಡಿದರೆ ರಾಜಮೌಳಿಯವರಲ್ಲಿರುವ ಆ ನಿರ್ದೇಶಕನಿಗೆ ಒಂದು ಸಲಾಂ ನೀಡಲೇಬೇಕು.ಒಂದು ಮಿನಿಯೇಚರ್ ಆರ್ಟಿಷ್ಟ್ ಆಗಿ ಕಂಡುಬರುವ ಚಿತ್ರದ ನಾಯಕಿ ಶಮಂತಾ ಅವರ ಪಾತ್ರವೂ ಗಮನ ಸೆಳೆಯುವಂತದ್ದು.ಚಿತ್ರದ ಮೊದಲ ಕೆಲವೆ ಕೆಲವೂ ನಿಮಿಷಗಳಲ್ಲಿ ಚಿತ್ರದ ನಾಯಕನಾಗಿ ಕಂಡು ಬರುವ ನಾನಿ ಅವರ ಪಾತ್ರ ಗಮನಸೆಳೆಯುತ್ತಲೆ ಕೊನೆಗೊಂಡು ನೊಣ ಚಿತ್ರವನ್ನೂ ಆವರಿಸಿಕೊಂಡು ಬಿಡುತ್ತೆ.ಸೆಂಥಿಲ್ ಅವರ ಉತ್ತಮ ಕ್ಯಾಮಾರ ವರ್ಕ್ ಕೂಡ ಚಿತ್ರವನ್ನು ದೃಶ್ಯ ಕಾವ್ಯವಾಗಿ ಮೂಡಿಸುತ್ತೆ. ಒಂದೊಳ್ಳೆ ಚಿತ್ರ “ಈಗ” ಅನ್ನುವದರಲ್ಲಿ ಎರಡೂ ಮಾತಿಲ್ಲ,ಚಿತ್ರದ ದೃಶ್ಯಗಳಲ್ಲಿ ಒಂದು ಸೂಜಿ ಬಿದ್ದರೂ, ನೀರು ಹಾಯಿಸುವ ಪೈಪ್ ಎಡವಿದರೂ ಇಂತಹ ಸಣ್ಣ ಪುಟ್ಟ ಹಲವು ಘಟನೆಗಳೂ ನಡೆದರೂ ಕೂಡ ಅದು ಕಥೆಯ ಹೊರತಾಗಿದ್ದು ಅಲ್ಲ ಬದಲಾಗಿ ಅದೊಂದು ಸಕಾರಣಕ್ಕೆ, ಇಂತಹುಗಳೆ “ಈಗ” ನಿರ್ದೇಶಕನ ಗಟ್ಟಿತನ.ಕಮರ್ಷಿಯಲ್ ಎಲಿಮೆಂಟ್ಸ್ ಗಳೂ ಬೇಕೆಂದು ಇಲ್ಲ ಸಲ್ಲದ್ದನ್ನೂ ಸೇರಿಸದೆ ಒಂದೊಳ್ಳೆ ಕಮರ್ಷಿಯಲ್ ಚಿತ್ರವಾಗಿ “ಈಗ” ಮೂಡಿಬಂದಿರುವದನ್ನು ಕಾಣಬಹುದು.ಒಟ್ಟಿನಲ್ಲಿ ಕುಟುಂಬ ಸಮೇತವಾಗಿ ಚಿತ್ರವನ್ನೂ ಅಸ್ವಾದಿಸಬಹುದಾದದ್ದು, ಅದರಲ್ಲೂ ಮುಖ್ಯವಾಗಿ ಮನೆಮಂದಿ ಮಕ್ಕಳ ಜೊತೆ ಈ ಚಿತ್ರವನ್ನೂ ನೋಡಿದಲ್ಲಿ ಇನ್ನಷ್ಟು ರುಚಿಯಾಗಬಲ್ಲುದಾದ ಚಿತ್ರವಿದು.ನೊಣದ ಆಟಾಟೋಪ ಮಕ್ಕಳನ್ನೂ ಕೂಡ ತನ್ನತ್ತ ಸೆಳೆಯಬಲ್ಲುದು. ಹಾಗಿದ್ದರೆ ಮತ್ಯಾಕೆ ತಡ, ಈಗ ಚಿತ್ರವನ್ನೂ ಈಗಲೇ ಅಲ್ಲದಿದ್ರೂ ನೋಡ್ದೆ ಇರ್ಬೇಡಿ.]]>

‍ಲೇಖಕರು G

11 July, 2012

1 Comment

  1. Nataraju S M

    ಒಳ್ಳೆಯ ಲೇಖನ ರಾಘಣ್ಣ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading