ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ 'ಇತಿಹಾಸ'

ಇತಿಹಾಸ
ಕಾಲ, ಕಾರ್ ಬಾರು, ಕಲಸಂಬಲಸ…
ನಟವರ್ಗ: ಶಾರದ, ಕಾವ್ಯ, ಗಗನ್, ಜಗದೀಶ್, ರಾಘವೇಂದ್ರ, ಮಧುಸುಧನ್, ವೀರೇಶ್,
ಸಂದೀಪ್, ಕಿರಣ, ಯಶವಂತ್,ಅಶೋಕ್, ಶರತ್, ಆದರ್ಶ್.
ವಿನ್ಯಾಸ: ಸಿದ್ಧಾರ್ಥ ಮಾಧ್ಯಮಿಕ
ಬೆಳಕು, ಛಾಯಾ ಚಿತ್ರ ಮತ್ತು ಪ್ರಚಾರ : ಲೇಖಾ ನಾಯ್ಡು
ವಸ್ತ್ರ ವಿನ್ಯಾಸ: ಶಾರದ ಜಿ.ಎಸ್
ಮೂಲ ಕಥೆ: ಎಸ್ ದಿವಾಕರ್.
ರಂಗರೂಪ ಮತ್ತು ನಿರ್ದೇಶನ: ಸಿದ್ಧಾರ್ಥ ಮಾಧ್ಯಮಿಕ.
1985ರಲ್ಲಿ ಬಳ್ಳಾರಿ ಜಿಲ್ಲೆ ಕುಡಿತಿನಿ ಗ್ರಾಮದಲ್ಲಿ ನಾಟಕ ಕಂಪನಿಯ ಕುಟುಂಬ ಒಂದರಲ್ಲಿ ಜನನ. 2007ರಲ್ಲಿ “ಕಿನ್ನರ ಮೇಳ” ರೆಪರ್ಟರಿಯಲ್ಲಿ ನಟನಾಗಿ ದುಡಿಮೆ. “ನೀನಾಸಂ ರಂಗಶಿಕ್ಷಣ ಕೇಂದ್ರ”ದಲ್ಲಿ ಡಿಪ್ಲೊಮಾ 2008-09ರಲ್ಲಿ. ಕಾಲೇಜುಗಳಿಗೆ ‘ಬಹುಮುಖಿ’, ‘ನಮ್ಮ ಇತಿಹಾಸ’ ನಾಟಕಗಳ ನಿರ್ದೇಶನ. ಮಕ್ಕಳಿಗೆ ‘ತಾಯಿಯ ಒಲವು’, ‘ತಿರುಕನ ಕನಸು’ಗಳ ನಿರ್ದೇಶನ.
ನಟನೆಯ ತರಬೇತಿಗಳನ್ನು ಮಾಡುತ್ತ, ನಾಟಕಗಳಲ್ಲಿ ನಟಿಸುತ್ತ ಸಂಪೂರ್ಣ ರಂಗಭೂಮಿಯಲ್ಲಿ ತೊಡಗಿದ್ದು, ಕೆಲ ವರ್ಷಗಳಿಂದ ಕೆಲ ಸಿನಿಮಾಗಳಲ್ಲಿ ನಟನೆ.
‘ನಮ್ಮ ಇತಿಹಾಸ’ ಬರೆದು ನಿರ್ದೇಶಿಸಿದ್ದು 2010ರಲ್ಲಿ. ‘ಈ ನಾವು’ ಬರೆದು ನಿರ್ದೇಶಿಸಿದ್ದು 2014 ರಲ್ಲಿ. ಎಸ್.ದಿವಾಕರ್ ಅವರ ‘ಇತಿಹಾಸ’ ಕಥೆಯ ರಂಗರೂಪ ಹಾಗು ನಿರ್ದೇಶನ 2015 ರಲ್ಲಿ.
ತಂಡದ ಬಗ್ಗೆ:
ನಾವು ಕೆಲ ಗೆಳೆಯರು ಕಳೆದ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡವರು. “ಬಯಲ ಆಟ”ಎಂಬ ತಂಡ ಕಟ್ಟಿಕೊಂಡು ಒಂದು ವರ್ಷ ಕಳೆದಿದೆ.
ಸಮಾಜವಾದಿ ವಿಚಾರಗಳಿಗೆ ಮನಸೋತ ನಾವು ಈ ಸಧ್ಯದ ನಮ್ಮ ರಂಗಭೂಮಿಯು ವ್ಯಾಪಾರೀಕರಣ, ಜನರನ್ನು ಬರಿದೇ ನಗಿಸುವ ಉದ್ಧೇಶಗಳಿಂದ ಪೊಳ್ಳಾಗುತ್ತಿರೋದು ಕಂಡು ಅಸಮಾಧಾನದಿಂದ ನಮ್ಮದೇ ನಿಜನೆಲೆಗಳನ್ನು ಹುಡುಕಿಕೊಳ್ಳಲು, ಅದರ ಮೂಲಕ ನಿಜದರ್ಥದಲ್ಲಿ ರಂಗಭೂಮಿಯನ್ನು ಅರಿಯಲು ಕೌತುಕ ಮತ್ತು ಉಮೇದುಗಳಿಂದ ಕೆಲಸಮಾಡಲಿಚ್ಚಿಸುತ್ತಿದ್ದೇವೆ.
ಬಯಲ ಆಟ 
bayala aata invite

‍ಲೇಖಕರು Avadhi

1 February, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading