ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಸಿಲದಿಂದ ಬ್ಲಾಗ್ ವರೆಗೆ

ಪರ್ಶಿಯನ್, ಅರೇಬಿಕ್, ಸಂಸ್ಕೃತ, ಗ್ರೀಕ್, ಲ್ಯಾಟಿನ್ನಂತಹ ಭಾಷೆಗಳಂತೆ ಪ್ರಾಚೀನಕಾಲಕ್ಕೆ ಸೀಮಿತವಾಗಿದೆ. ಆಧುನಿಕ ಕಾಲದಲ್ಲೂ ಜೀವಂತವಾಗಿರುವ, ಕ್ರಿಯಾತ್ಮಕವಾಗಿರುವ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಕರೆಯಬಹುದೇ ಎನ್ನುವ ಚರ್ಚೆ ಕನ್ನಡದಲ್ಲಿ ನಡೆದಿದೆ. ನಾನು ಮತ್ತು ಭಾಷಾತಜ್ಞರಾದ ಡಾ.ಕೆ.ವಿ.ನಾರಾಯಣ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಸಿದ್ಧಪಡಿಸಿದ ಪ್ರಸ್ತಾವನೆಯಲ್ಲಿ ಕನ್ನಡವನ್ನು ‘ಒಂದು ಜೀವಂತ ಶಾಸ್ತ್ರೀಯ ಭಾಷೆ’ ಎಂದು ಕರೆದೆವು. ಇದೊಂದು ಹೊಸ ಪರಿಭಾಷೆ. ಪ್ರಾಚೀನತೆಯುಳ್ಳ ಮತ್ತು ಪ್ರಭಾವಶಾಲಿಯಾಗಿರುವ ಕನ್ನಡ ಭಾಷೆಯು ಮೂರು ಸಹಸ್ರಮಾನಗಳ ಅವಧಿಯ ವಿಸ್ತಾರವನ್ನು ಹೊಂದಿರುವ ಭಾಷೆ. ಭಾರತದ ಭಾಷೆಗಳಲ್ಲಿ ಕನ್ನಡ ಮತ್ತು ತಮಿಳು – ಈ ಎರಡು ಭಾಷೆಗಳು ಮಾತ್ರ ಮೂರು ಸಹಸ್ರಮಾನಗಳ ದೀರ್ಘಾವಧಿಯ ಹರಹು ಉಳ್ಳ ಜೀವಂತ ಶಾಸ್ತ್ರೀಯ ಭಾಷೆಗಳು.

ತೇಜಸ್ವಿ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಹಾಸನದ ತರುಣ ತಂತ್ರಜ್ಞರಾದ ಆನಂದ, ಮಂಜಾಚಾರಿ, ಸುಧೀರ್ಘ ಕ್ರಿಯಾಶೀಲತೆಯಿಂದ ಡಾ.ಚಿದಾನಂದಗೌಡ ಮತ್ತು ಡಾ.ಟಿ.ಎನ್.ನಾಗಭೂಷಣರ ಪರಿಶೀಲನೆಯೊಂದಿಗೆ ಕುವೆಂಪು ಕನ್ನಡ ತಂತ್ರಾಂಶದ ರೂಪೀಕರಣವನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿಯು ಕೈಗೆತ್ತಿಕೊಂಡಿತು. ಕುವೆಂಪು ಕನ್ನಡ ತಂತ್ರಾಂಶದ 1.0 ಆವೃತ್ತಿ 2007ರಲ್ಲಿ ಬಿಡುಗಡೆಯಾಯಿತು. (www.kannadauniversity.org) ಅದರ ಮುಂದಿನ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ತೇಜಸ್ವಿ ನಮ್ಮನ್ನು ಅಗಲಿದರು. ಅದರ ಮುಂದುವರಿಕೆ ಸಾಧ್ಯವಾಗಲಿಲ್ಲ. ಈಗ ಕರ್ನಾಟಕ ಸರ್ಕಾರ ಡಾ. ಚಿದಾನಂದಗೌಡರ ಅಧ್ಯಕ್ಞತೆಯಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ತಜ್ಞರ ಸಮಿತಿಯೊಂದನ್ನು ರಚಿಸಿರುವುದು ತುಂಬಾ ಮುಖ್ಯವಾದ ಬೆಳವಣಿಗೆ. ಒಂದೆಡೆ ಶಾಸ್ತ್ರೀಯ ಭಾಷೆಯಾಗಿ ಕನ್ನಡಕ್ಕೆ ಮಾನ್ಯತೆ ಬಂದ ಸಂದರ್ಭದಲ್ಲಿ ಕನ್ನಡಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗಾಗಿ ಕರ್ನಾಟಕ ಸರ್ಕಾರ 25 ಕೋಟಿಗಳ ಅನುದಾನ ಕೊಡುತ್ತಿದೆ. ಇನ್ನೊಂದೆಡೆ ತಂತ್ರಜ್ಞಾನದ ಭಾಷೆಯಾಗಿ ಕನ್ನಡವನ್ನು ಅಭಿವೃದ್ಧಿಗೊಳಿಸಲು ಕನ್ನಡ ತಂತ್ರಾಂಶ ನಿರ್ಮಾಣದ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ. ಇವೆರಡೂ ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಎರಡು ಮುಖ್ಯ ಹೆಜ್ಜೆಗಳು.
ಪೂರ್ಣ ಓದಿಗೆ ಭೇಟಿ ಕೊಡಿ- ಬಿ ಎ ವಿವೇಕ ರೈ

‍ಲೇಖಕರು avadhi

17 March, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading