”ದೇವರು ಇದ್ದರೆ ಅವನಿಗೆ ನಮ್ಮ ಸೇವೆ ಬೇಕಿಲ್ಲ. ಸೇವೆ ಬೇಕಿರುವುದು -ಮಾನವನಿಗೆ ಇದನ್ನು ಎಷ್ಟುಸಾರಿ ಒತ್ತಿಹೇಳಿದರೂ ಸಾಲದು. ನಾವು ಮರೆಯುತ್ತಿರುವುದು ಈ ಸತ್ಯವನ್ನು! ಪ್ರತಿವರ್ಷವೂ ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆಯಿಲ್ಲದೇ, ತಲೆಯ ಮೇಲೊಂದು ಚಾವಣಿಯಿಲ್ಲದೇ, ಚಳಿಯಿಂದ ರಕ್ಷಣೆ ದೊರೆಯದೇ ಎಷ್ಟೋ ಜನ ಸಾಯುತ್ತಾರೆ- ಇದನ್ನು ನಾವೆಲ್ಲ ವೃತ್ತಪತ್ರಿಕೆಗಳಲ್ಲಿ ಓದಿದ್ದೇವೆ. ಆದರೆ ನಾವು ಆಲಯಗಳನ್ನು, ಮಂದಿರಗಳನ್ನು ಕಟ್ಟಿಸುವುದು ದೇವರಿಗೆ! ಪೀತಾಂಬರ ಅರ್ಪಿಸುವುದು ದೇವರಿಗೆ!
ಏಕೈಶ್ವರ್ಯೆ ಸ್ಥಿತ ಎಂದು ನಾವು ಕಲ್ಪಿಸಿಕೊಂಡಿರುವ ದೇವರಿಗೆ ಕಿರೀಟ ಮಾಡಿಸುತ್ತೇವೆ. ಚಿನ್ನದ ರಥ ಮಾಡಿಸುತ್ತೇವೆ, ಹೊಟ್ಟೆಗಿಲ್ಲದೇ ಕದಿರುಕಡ್ಡಿಯಾಗಿ ನರಳುತ್ತಿರುವವರು ನಮ್ಮೆದುರಿಗಿರುವಾಗ ಯಜ್ಞಗಳನ್ನು ಮಾಡಿ ಟನ್ ಗಟ್ಟಲೇ ಅನ್ನತುಪ್ಪಗಳನ್ನು ಬೆಂಕಿಗೆ ಆಹುತಿ ಕೊಡುತ್ತೇವೆ – ದೇವತೆಗಳಿಗೆ ತೃಪ್ತಿಯಾಗಲೆಂದು…,
ದೇವರು ಪರಲೋಕ ಇತ್ಯಾದಿಗಳನ್ನು ಕುರಿತ ನಾವು ಪರಿಶೀಲಿಸುವ ನಂಬಿಕೆಗಳಿಗೆ ಬದಲಾಗಿ ನಾವು ತಂದುಕೊಳ್ಳುವ ನಂಬಿಕೆ ಇಹಲೋಕವನ್ನು ಕುರಿತದ್ದೆ ಆಗಬೇಕು. ಇಲ್ಲಿಯ ಬದುಕನ್ನು ಕುರಿತದ್ದೇ ಆಗಬೇಕು..,ತಾಯಿ ತಂದೆಯರು, ಹೆಂಡತಿ ಮಕ್ಕಳು. ಬಂಧುಗಳು. -ಸಹಮಾನವರು ಇವರೆಲ್ಲರನ್ನೂ ಮತ್ತು ಅವರ ಬದುಕನ್ನೂ ಕುರಿತದ್ದೇ ಆಗಬೇಕು. ಬದುಕಿಗೆ ಉದ್ದೇಶವನ್ನೂ ಸಾರ್ಥಕಯವನ್ನೂ ಕೊಟ್ಟು ಅದನ್ನು ನಿಂತು ನಡೆಸುವ ಈ ಮತದಲ್ಲೂ ಸೇವೆಗೆ ಮುಖ್ಯ ಸ್ಥಾನವುಂಟು. ಆದರೆ ಇದು ಮಾನವಕುಲದ ಸೇವೆ. ಈ ಮತವನ್ನು – ಶೈವಮತ, ವೈಷ್ಣವಮತ, ಇತ್ಯಾದಿಗಳಿಗೆ ಬದಲಾಗಿ ನಾವು ತಂದುಕೊಂಡಿರುವ ಮತವನ್ನು – ಮಾನವಮತ ಎಂದು ಕರೆಯೋಣ..
Generally people love to see nakedness in many things including human beings, male or female. At the same time, they don’t wish to see the NAKED TRUTH.
vicharagalannu muttisuva mulaka, e tarahada pustakagalannu odisuva mulaka navu manujaragi etararannu manujaragi madabahudagide. e tarahada vicharagalannu muttisutiruva avadhige danyavadagalu.
Nimma e lekhana oodida nantara manasinalli vichara sangarshagala ale gaĺu mudibaraudantu khare madam! abinadanegalu ,
Chi na halli kirana