ಇವತ್ತು ಅಂಬೇಡ್ಕರ್ ಸಿಕ್ಕಿದ್ದರು..!

ಎನ್ ರವಿಕುಮಾರ್ / ಶಿವಮೊಗ್ಗ

ಕಣ್ಣುಗಳು ನೀರುಕ್ಕಿ
ಧುಮು ಧುಮುಗುಡುತ್ತಿದ್ದವು
ಕನ್ನಡಕ ಮಂಜು ಮುಸುಕಿದಂತೆ
ಮಬ್ಬುಗೊಂಡು ದಾರಿ ಹುಡುಕುತ್ತಿತ್ತು
ಕೊರಳು ಸೆರೆಯುಬ್ಬಿ ಬಿಕ್ಕಳಿಸುತ್ತಿದ್ದರು..
ಅವರ ಕೋಟು ನೆಂದು ನೀರು
ತೊಟ್ಟಿಕ್ಕುತ್ತಿತ್ತು.
ತೋಳತೆಕ್ಕೆಯಲ್ಲಿದ್ದ ಸಂವಿಧಾನ
ಭಯಭೀತಗೊಂಡು ಇನ್ನಷ್ಟು ಅವುಚಿಕೊಂಡು ಅವರೆದೆಗೆ ಬಿಗಿಗೊಳ್ಳುತ್ತಿತ್ತು.

‘ಯಾಕಿಷ್ಟು ದುಃಖ ದೊರೆಯೆ’? ಎಂದೆ.

‘ ಇದು ಬರೀ ದುಃಖವಲ್ಲ, ಕರುಳ ಕೋಣೆಯ ಮಹಾದುಃಖ.’

ಮಹಾಮನೆಯಲ್ಲಿ ರಜ ತುಂಬಿದೆ.
ಹುಳ,ಉಪಟೆಗಳು, ಕಾಡುಮೃಗಗಳು ಘೀಳಿಡುತ್ತಿವೆ.

ಕಲ್ಲು,ಮಣ್ಣು, ಕಂಚಿನ ನನ್ನ ಮೂರ್ತಿ ಒಡೆದು ಚೂರು ಚೂರು ಮಾಡಿದ್ದಕ್ಕೆ ದುಃಖವಿಲ್ಲ.
ಅಧಿಕಾರದ ಫಲ್ಲಂಗದ ಮೇಲೆ
ದೇವರ ಫಲಕ್ಕಿ ಯ ಮೇಲೆ ಹಾಲುಗಲ್ಲದ ಹಸುಗೂಸುಗಳ,
ಹೆಣ್ಣು ಮಕ್ಕಳ ಒಡಲ ಹುರಿದು ಕೊರಳ ಹಿಸುಕಿ ಕೇಕೆ ಹಾಕುವಾಗ ನನ್ನ
ಕರುಳಬಳ್ಳಿ ವಿಲವಿಲಗೊಳ್ಳುತ್ತಿದೆ..
ಎಂದರು.

ಇವತ್ತು ನನ್ನ‌ಜನ್ಮದಿನ.
ಪುಷ್ಪಾಲಂಕೃತ ತೇರಿನ ಮೇಲೆ
ವಿಜೃಂಭಣೆಯ ನನ್ನ ಮೆರವಣಿಗೆ.
ಸಂಸತ್ತಿನ ಮಹಾಸೌಧದಲ್ಲಿ
ನನ್ನ ಗುಣಗಾನ .
ಅಬ್ಬಬ್ಬಾ! ಕಿವಿಗಡಚಿಕ್ಕುವಂತೆ
ಭಾಷಣ
ಆಸೀಫಾಳ ಅವಳಂತಹ
ಅದೆಷ್ಟೋ ಕೂಸುಗಳ ಆರ್ತ ಆಕ್ರಂದನ ಯಾರಿಗೂ ಕೇಳಿಸದಿರಲೆಂದೆ ಇರಬೇಕು.
ಎಂದರು..
ನಾಲಿಗೆ ನಡುಗುತ್ತಿತ್ತು
ಅಂಬೇಡ್ಕರ್ ಅವರ‌ ಕಣ್ಣೀರು ಕಡಲಾಗಿ ಹರಿದಿತ್ತು.

‍ಲೇಖಕರು avadhi

April 14, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. umesh t p

    ಅರ್ಥಪೂರ್ಣ ಹಾಗು ಸಕಾಲಿಕವಾದ ಚಿತ್ರಣ. ಮನಕಲಕುವ ಪದಗಳು.

    ಪ್ರತಿಕ್ರಿಯೆ
  2. Sathisha b m

    ಅಭಿನಂದನೆಗಳು ಸರ್… ಸಮಕಾಲೀನ ನೆಲೆಯಲ್ಲಿ ಸಮಾನತೆಗಾಗಿ ತುಡಿಯುವ ಸಕ್ರಿಯಶೀಲ ಬರಹದ ಆಶಯದ ಕವಿತೆ..

    ಪ್ರತಿಕ್ರಿಯೆ
  3. ಯಲ್ಲಪ್ಪ ಎಮ್ ಮರ್ಚೇಡ್

    ಸೂಪರ್ ಕವಿತೆ, ಪ್ರಸ್ತುತ ಸಮಕಾಲಿನ ಚಿಂತನೆಯ ಅಕ್ಷರ ರೂಪ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: