-ಎಸ್ ಸಿ ದಿನೇಶ್ ಕುಮಾರ್
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕನ್ನಡ ಮಠ ಎಂದೇ ಹೆಸರಾಗಿರುವ ಚಿಂಚಿಣಿ ಮಠಕ್ಕೆ ಕಳೆದ ವಾರ ಹೋಗಿದ್ದೆ. ಹೋಗುವ ದಾರಿಯಲ್ಲಿ ಗೋಟೂರು ಎಂಬ ಹಳ್ಳಿ. ಜತೆಯಲ್ಲಿದ್ದ ಬೆಳಗಾವಿಯ ಗೆಳೆಯ ಮಹದೇವ ಅಲ್ಲಿನ ಪ್ರವಾಸಿಮಂದಿರವನ್ನು ತೋರಿಸಿ, ಇಲ್ಲೇ ನೋಡ್ರೀ ಚಿತ್ರ ನಟಿ ಕಲ್ಪನಾ ಆತ್ಮಹತ್ಯೆ ಮಾಡಿಕೊಂಡಿದ್ದು ಎಂದರು. ಹಾಗೆಂದ ತಕ್ಷಣ ಒಂದೆರಡು ಫೋಟೋ ಹೊಡೆದೆ. ಆ ಸಣ್ಣ ಕಟ್ಟಡ ಸಾವನ್ನೇ ಹೊದ್ದು ಮಲಗಿಕೊಂಡಂತೆ ಕಾಣಿಸಿತು






ಫೋಟೋ ಚೆನ್ನಾಗಿದೆ ಆದರೆ ಅದರೊಂದಿಗೆ ನಾವು ಅಗಾಧವಾಗಿ ಪ್ರೀತಿಸುತ್ತಿದ್ದ ಕಲ್ಪನಾ ಇಲ್ಲಿಂದ ಇಲ್ಲವಾದರೂ ಎನ್ನುವ ನೋವೂ ನಿಮ್ಮ ಫೋಟೋ ನೋಡಿದ ತಕ್ಷಣ ಒದ್ದುಕೊಂಡು ಬಂತು. ಸರಜೂ ಕಾಟ್ಕರ್ ಬರೆದ ಸಾಕ್ಷಿ ಕೃತಿ ಓದಿದ್ದೀರಾ? ಪತ್ರಿಕೋದ್ಯಮದ ಸುದ್ದಿಯ ಹಿಂದಿನ ಕಥೆಗಳನ್ನು ಬಿಚ್ಚಿಟ್ಟಿದ್ದಾರೆ. ಆ ಪುಸ್ತಕದಲ್ಲಿ ಕಲ್ಪನಾ ಈ ಬಂಗಲೆಯಲ್ಲಿ ಸತ್ತ ಒಂದು ವಿವರವೂ ಇದೆ. ಇನ್ನೆಲ್ಲೂ ಓದದ ವಿವರಗಳು.