ಇನ್ನೊಂದು ಮುಖವಿದೆ ಇವಕ್ಕೆ..

ಎಸ್ ನಾಗಶ್ರೀ

ಒಡೆದ ಮನಸಿಗೆ ಇನ್ನೂ
ರೂಪಕಗಳು ಸೋಲುತ್ತಿವೆ
ಹಾಲು ಒಡೆಸಿ ಚಂಪಾಕಲಿ
ಒಡೆದ ಕನ್ನಡಿಗೆ ತೇಪೆ ಕಸೂತಿ
ಒಡೆದ ಹೃದಯಕ್ಕೆ ಶಸ್ತ್ರಚಿಕಿತ್ಸೆ
ತಳವೊಡೆದ ಪಾತ್ರೆಗೆ ಅಧ್ಯಾತ್ಮ
ಬಳೆಚೂರಲ್ಲಿ ಚೌಕಾಭಾರ
ಇನ್ನೊಂದು ಮುಖವಿದೆ ಇವಕ್ಕೆ

ಒಡೆದ ಮನಸ್ಸಿಗೆ ತೇಪೆ ಹಚ್ಚುವುದೆಂತು
ಗಾಯ ಮಾಯ್ದರೂ ಕಲೆ ಅಮರ
ಅತ್ತಮೊಗದ ನಗುವಿಗೂ ನೋವಿನ ಕಿಸಿರು
ನೂರು ಸಂಗತಿಯ ಗಾನಕ್ಕೆ ತಪ್ಪಾದ ಒಂದು ನಡೆ
ಸಾವಿರ ಮೆಟ್ಟಿಲಿನ ಬೆಟ್ಟದಲ್ಲಿ ಒಂದು ಎಡರುಗಾಲು
ಸೂಕ್ಷ್ಮಘಳಿಗೆಯಲಿ ಬಾಯಿಜಾರಿದ
ಒಂದು ಪೆಡಸುನುಡಿ

ಬಿದ್ದಮೇಲೂ ತಿರುಗುತ್ತಲೇ ಇರುವ ಗಾಲಿ
ಸತ್ತಮೇಲೂ ಸುತ್ತುತ್ತಲೇ ಇರುವ ಆತ್ಮ
ಏನೋ ಹೇಳ ಹೊರಟು ಮತ್ತೇನೋ
ಆಗುವಾಗ
ಒಂದು ಮನಸ್ಸು ಒಡೆಯಬಹುದು
ಮತ್ತೆ ಸೇರಲೆಂದು ಶತಪ್ರಯತ್ನ ಏಕೆ?
ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟೇ

‍ಲೇಖಕರು avadhi

July 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Anand Rugvedi

    ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟು!! ಚಂದದ ಸತ್ಯ

    ಪ್ರತಿಕ್ರಿಯೆ
  2. Roopa

    ಮತ್ತೆಲ್ಲಕ್ಕೂ…..ನೋವು ಮರೆಯಲು ಮತ್ತೊಂದು ಬದುಕು ….. ಮನ್ನಸ್ಸಿಗೆ ಮಾತ್ರ ಒಡೆದ ಬಿರುಕಿನೊಳಗೆ ಒಸರುವ ನೋವಿನ ನಿರಂತರ ಹಸಿಗಾಯ …….

    ಪ್ರತಿಕ್ರಿಯೆ
  3. ಸರೋಜ ಪ್ರಶಾಂತಸ್ವಾಮಿ

    ಬಹಳ ಅರ್ಥ ಪೂರ್ಣ ಕವಿತೆ ಮೇಡಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: