ಇನ್ನೆಂದೂ ಬಚ್ಚಿಡುವ ಗೋಜಿಗೆ ಹೋಗಲಾರೆ..

ಮಡಿಸಿಟ್ಟ ಬೆಳಕಿಂದ

ಬಿದಲೋಟಿ ರಂಗನಾಥ್


ಮಡಿಸಿಟ್ಟ ಬೆಳಕನು ಬಿಡಿಸುವ ಹೊತ್ತಿಗೆ
ಜರುಗಿದ್ದು ಕೊಲೆ ಸುಲಿಗೆ ಅತ್ಯಾಚಾರ ಎಷ್ಟೊಂದು
ರಕ್ತ ಚೆಲ್ಲಿತ್ತು,
ತೊಟ್ಟ ಅರಿವೆಗಳು ಹರಿದಿದ್ದವು
ಬಳೆ ಚೂರುಗಳು ನೆಣ ಮುರಿದುಕೊಂಡು ಉರುಳಿದ್ದವು
ಆಯಾತನ ಖಾಲಿಯಾಗಿತ್ತು.
 
ತೊನೆತ ಪ್ರೇಮ ಕಾಟಿಗೆ ಬಳಿದುಕೊಂಡು
ಅಗೈರ ಗುರುತು ಹೆಜ್ಜೆ ಊರಿತ್ತು
ಅಪಚಯದ ಮಾತುಗಳು ಬಿದ್ದಿದ್ದವು
ನಾಲಗೆ ಕತ್ತರಿಸಿಕೊಂಡು
 
ಪ್ರಾತ್ಯಕ್ಷಿಕೆಗೆ ಬೆಳಕು
ಕಣ್ಣು ಕಳೆದುಕೊಂಡಿದ್ದೇ ಬಂತು
ಯಾರು ನಿಂತರು? ನನ್ನಂತವರು
ಎದುರಿಗೆ ಕೆಲವರನ್ನು ಬಿಟ್ಟರೆ.
ಪ್ಲಥ್ವಿ ಬಾಯಿ ಬಿಡಲಿಲ್ಲ
ಬಿಟ್ಟಿದ್ದರೆ ಮಡಿಸಿಟ್ಟ ಬೆಳಕನು ಬಿಡಿಸುವ ದರ್ದು
ನನ್ನದಾಗುತ್ತಿರಲಿಲ್ಲ
ಘೋರ ಅಕೃತ್ಯಗಳನ್ನು ನೋಡಿದ ಪಾಪವ
ಕಣ್ಣುಗಳು ತುಂಬಿಕೊಲ್ಳುವ ಹರೀಕತ್ತು ನಾಟುತ್ತಿರಲಿಲ್ಲ
ಅಯ್ಯೋ ನಾನಂಬವ ದೈವ ಶಕ್ತಿಯೇ
ಇನ್ನೆಂದೂ ಬಚ್ಚಿಡುವ ಗೋಜಿಗೆ ಹೋಗಲಾರೆ
ಇಷ್ಟ ಬಂದಂತೆ ಆಡುವ ಬೆಳಕನು.
 

‍ಲೇಖಕರು G

November 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. vasudeva nadig

    hosa paribhasheyalli padyavannu hidididuva ranganath avaraddu appata hosadhvani..hosa nota

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: