ಶ್ರೀಧರ ಹೆಗಡೆ ಭದ್ರನ್
ಇವು ‘ಕತೆ’ ಗಳಾ? ಕತೆ ಎಂದರೆ ಇವೇನಾ? ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟಿಸಬಲ್ಲ, ಸಾಂಪ್ರದಾಯಿಕ ಕತೆಯ ಮಾದರಿಯನ್ನು ಮುರಿಯಬಲ್ಲ ಬರವಣಿಗೆಗಳು ಇವು. ಹೀಗಾಗಿಯೇ ಇವನ್ನು ತಿರುಮಲೇಶರು ‘ಕಥಾನಕ’ ಗಳು ಎಂದು ಕರೆದಿದ್ದಾರೆ. ಕತೆಗಳಲ್ಲಿ ಕಥನವಿದ್ದರೆ ಕಥಾನಕಗಳಲ್ಲಿ ‘ಕಥನ’ದ ಪ್ರಕ್ರಿಯೆಯೇ ಅವತರಿಸಿರುತ್ತದೆ. ಕತೆಯ ಚೌಕಟ್ಟಿಗೆ ಒಳಪಡಿಸಿದರೆ ಒಂದೊಂದು ಕಥಾನಕವೂ ಹಲವಾರು ಕತೆಗಳಾದಾವು.
ಕೆ. ವಿ. ತಿರುಮಲೇಶ್ ತುಂಬಾ ಬರೆದಿದ್ದಾರೆ. ಬರೆದಿದ್ದೆಲ್ಲವೂ ವಿಭಿನ್ನವಾದವು. ಅದು ಕವಿತೆ, ದೀರ್ಘ ಕಾವ್ಯ, ಅಂಕಣ ಬರಹ, ವಿಮಶರ್ೆ, ಅನುವಾದ, ಮಕ್ಕಳ ಕವಿತೆ, ಕತೆ-ಕಾದಂಬರಿ ಅಲ್ಲೆಲ್ಲ ಅವರ ವಿಶಿಷ್ಟತೆಯ ಛಾಪಿದೆ. ಇಲ್ಲಿಯ ಕಥಾನಕಗಳಲ್ಲೂ ವಮಿಂಚುವುದು ಅದೇ ‘ತಿರುಮಲೇಶತನ’.
ಇವು ಕೇವಲ ತಿರುಮಲೇಶ್ ಅವರ ಪ್ರಯೋಗಗಳು ಮಾತ್ರವಲ್ಲ; ಬದಲಿಗೆ ಕನ್ನಡ ಪರಂಪರೆಗೆ ಹೊಸ’ದೊಂದಿ’ಷ್ಟನ್ನು ಸೇರಿಸುವ, ಮುಂದುವರೆಸುವ ಪ್ರಯತ್ನಗಳಾದುದರಿಂದ ವಿಶೇಷವಾಗಿ ಗಮನಿಸಬೇಕಿದೆ.
-ಶ್ರೀಧರ ಹೆಗಡೆ ಭದ್ರನ್
(ಬೆನ್ನುಡಿ)
ಅಭಿನವ
ಬೆಲೆ : ರೂ. 150/-
0 ಪ್ರತಿಕ್ರಿಯೆಗಳು