ಜಯರಾಮಾಚಾರಿ ಇತ್ತೀಚಿಗೆ ತಾನೆ ತಮ್ಮ ಕಥಾ ಸಂಕಲನ ‘ಕರಿಮುಗಿಲ ಕಾಡಿನಲ್ಲಿ’ ಹೊರತಂದು ಸುದ್ದಿಯಲ್ಲಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದು ಈಗ ಬೆಂಗಳೂರು ಮೆಟ್ರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಇವರ ತುಡಿತ ಬರವಣಿಗೆ ಹಾಗೂ ಸಿನೆಮಾದತ್ತಲೇ..
ಮೆಟ್ರೋ ಕಾಮಗಾರಿಯ ಸದ್ದಿನ ನಡುವೆಯೇ ಕುಪ್ಪಳ್ಳಿಗೆ ಜಾರಿ ಸಿನೆಮಾ ರಸಗ್ರಹಣದಲ್ಲಿ ಕೂರುತ್ತಾರೆ. ಸಿನೆಮಾದ ಹಲ ಮಗ್ಗುಲುಗಳ ಬಗ್ಗೆ ವರ್ಷಗಳಿಂದ ಇವರು ಹೊತ್ತ ಕನಸಿನ ಕಾರಣದಿಂದಾಗಿ ಈಗ The Knot ಎಂಬ ಕಿರುಚಿತ್ರ ಸಿದ್ಧವಾಗಿದೆ. ಅದರ ಟ್ರೇಲರ್ ಇಲ್ಲಿದೆ. ಜಯರಾಮಾಚಾರಿ ಅವರ ಕನಸಿಗೆ ಇನ್ನಷ್ಟು ರೆಕ್ಕೆ ಸಿಗಲಿ
0 ಪ್ರತಿಕ್ರಿಯೆಗಳು