ಆ ನೆಪದಲ್ಲಿ ’ಅವಧಿ’ಯದ್ದೂ ಸಹ ಒಂದು ಹಣತೆ…

ಸಿಜಿಕೆ ತನ್ನ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಬರೆದಾಗ ಫೋನಾಯಿಸಿದ್ದರು. ನಾನು ಏನಂತೀನೋ ಎನ್ನುವ ಒಂದು ಕುತೂಹಲ ಇತ್ತು. ನಾನು ಆಗ ಮಂಗಳೂರಿನಲ್ಲಿದ್ದೆ. ’ಇಲ್ಲೇ ಬನ್ನಿ, ನನ್ನ ಅಭಿಪ್ರಾಯ ಹೇಳುತ್ತೇನೆ’ ಅಂದೆ. ಒಂದು ಮತ್ತೊಂದಾಯಿತು.
ಸಿಜಿಕೆ ಯ ಈ ಆತ್ಮಕಥನದ ಬಗ್ಗೆ ಇಡೀ ಒಂದು ದಿನದ ಸಂಕಿರಣವನ್ನೇ ನಾವು ನಡೆಸಿಬಿಟ್ಟೆವು. ಸಂಜೆ ಚೌಟರ ಆ ಕಾಡಿನ ನಡುವಿನ ತೋಟದಲ್ಲಿ ಊಟ.
ಸಿಜಿಕೆ ಹೋಗುವ ಮುನ್ನ ನನ್ನ ಕೈ ಹಿಡಿದುಕೊಂಡವರೆ, ’ನನ್ನ ಶತ್ರು ಬಂದಿದ್ದರೂ ಈ ಸಂಕಿರಣದಲ್ಲಿ ಕೂತಿದ್ದರೆ ನನ್ನ ಮಿತ್ರನಾಗಿ ಹೋಗಿರುತ್ತಿದ್ದ, ಹಾಗೆ ಮಾಡಿಬಿಟ್ಟಿರಿ’ ಎಂದರು. ದನಿ ತೇವಗೊಂಡಿತ್ತು.
ಹಾಗೆ ಅಂದದ್ದು ನಿಜವೂ ಆಯಿತು. ಅವರು ಶತ್ರುವನ್ನೂ ಗೆಲ್ಲುತ್ತಾ ಹೋದರು. ಅವರ ಮುಂದೆ ಆಡಿ ಬೆಳೆದ ಹುಡುಗರು ಸಿಜಿಕೆಯ ಒಡಲಾಳದ ಕಿಚ್ಚನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪ್ರತಿ ವರ್ಷ ನಾಟಕ ಹಬ್ಬ ಮಾಡುತ್ತಿದ್ದಾರೆ.
ಆ ನೆಪದಲ್ಲಿ ’ಅವಧಿ’ಯದ್ದೂ ಸಹ ಒಂದು ಹಣತೆ.
 
ಜಿ ಎನ್ ಮೋಹನ್
ಪ್ರಧಾನ ಸಂಪಾದಕರು
ಅವಧಿ
 

‍ಲೇಖಕರು G

January 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. D.Ravivarma

    idu nijakku tumbaa arthapurna hanate…ci,ji,je gondu hrudayadaalada ranga namana…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: