ಆಡಿದ ಮಾತುಗಳೆಲ್ಲ ವಚನಗಳೇನಲ್ಲ..

 

ಕು ಸ ಮಧುಸೂದನ ನಾಯರ್ / ರಂಗೇನಹಳ್ಳಿ

 

ಸ್ವರ್ಗದ ಕುರುಹಿಲ್ಲವಿಲ್ಲಿ!

 

ಆಡಿದ ಮಾತುಗಳೆಲ್ಲ ವಚನಗಳೇನಲ್ಲ

ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ

ರಕ್ತ ಒಸರುವ ಗತದ ಗಾಯ

ಮುಲಾಮುಗಳಿಗೆಲ್ಲ ಮಾಯುವುದಿಲ್ಲ

ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ

ನರಕದ ಭಯ ಯಾರಿಗಿದೆ ಇಲ್ಲೀಗ?

ಸ್ವರ್ಗದ ಕುರುಹು ತೋರಿದರೆ ಮಾತ್ರ ನಂಬುವವರುಂಟಿಲ್ಲಿ ನರಕವ

ದೇಹವೇ ದೇಗುಲವೆಂಬುದು ನೆನಪಾದೊಡನೆ

ದೂರವಾಗಿ ಮೈಥುನದಾಸೆ

ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ

ಗುಂಪುಗಳಿಂದ ದೂರನಿಂತ

ತರುಣಿಯರ

ತೊಡೆಗಳಿಂದೊಸರುವ ರಕ್ತದಲಿ

ಅದೆಷ್ಟು ಜೀವಮೂಲಗಳು ವ್ಯರ್ಥವಾದವೆಂಬುದನ್ನು

ಲೆಕ್ಕವಿಡುವ ವಿಜ್ಞಾನದ ಪುಸ್ತಕಗಳ

ಮಸ್ತಕಕ್ಕಿಳಿಸದೆ

ಸುಮ್ಮನೆ ನಡೆದು ಬಿಡು ಅಲೆಮಾರಿಯಂತೆ

ಇಲ್ಲಿ ಸಿಗಲಾರದ್ದು ನಿನಗಿನ್ನೆಲ್ಲಯೂ ಸಿಗಲಾರದು.

ಹಡೆಯುವ ಬಯಕೆಗೆ

 

ಸಂಜೆ ಹುಯ್ಯುವ ಬಿಸಿಲು ಮಳೆ

ಕೃತಕವೆನಿಸಿ

ಕಾಮನಬಿಲ್ಲೂ ಕ್ಷಣಭಂಗುರವೆನಿಸಿ

ತಳಮಳಿಸಿದ ಮನಸು

ಹೊಕ್ಕುಳಾದಳದೊಳಗೆಲ್ಲೊ

ಕಡೆಗೋಲು

ಮಜ್ಜಿಗೆ ಕಡೆದಂತಾಗಿ

ಬಿಟ್ಟ  ಉಸಿರು ನೀಳವಾಗಿ

ಎದೆಬಡಿತ ಜೋರಾಗಿ

ನಿಂತರೆ ಸಾಕು ಮಳೆ

ಬಂದರೆ ಮತ್ತೆ ರವಷ್ಟು ಬಿಸಿಲು

ಮೈಕಾಯಿಸಿಕೊಳ್ಳಬೇಕು

ಸ್ಖಲಿಸಿಕೊಳ್ಳದೆ

ಬಸುರಾಗದೆ

ಹಡೆಯಲಾಗದೆ

ಬಂಜೆತನಕ್ಕೆ ಗುರಿಯಾದ ಕನಸುಗಳನ್ನಷ್ಟು

ಉಳಿಸಿಕೊಳ್ಳಬೇಕು

ಮರುಹಗಲು ಬರುವ ಬಿಸಿಲಿರದ

ಬೋರ್ಗರೆಯುವ ಬಿರು ಮಳೆಗೆ

ಸಾದ್ಯವಾದರೆ ಸಂಕೋಚವಿರದೆ

ತುಂಬಿಸಿಕೊಳ್ಳಬೇಕು

ಹಡೆಯುವ ಸಡಗರಕೆ ಸಾಕ್ಷಿಯಾಗಲು….

‍ಲೇಖಕರು avadhi

August 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: