ಅವನೆದೆ ಕಾವಿನಲಿ ಕರಗುತ್ತದೆ..

ಚಿತ್ತ ಕದಡಿದ ನೀರು…

ಡಾ. ಪ್ರೇಮಲತ ಬಿ.

ಬೆಳ್ಳಂಬೆಳಗು ನಸುನಕ್ಕು
ಮತ್ತೆ ಬಂದಿಹೆನೆಂಬ ಹೊತ್ತಲ್ಲಿ
ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ
ವರ್ತಮಾನವ ಕದಡದಿರಿ

ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ
ನೋವು ನಲಿವುಗಳ ಚಿತ್ತಾರದ ರಂಗೋಲಿ
ಹಾಲುಕ್ಕಿ ಹರಿದ ಬದುಕಿನಲಿ
ಒಂದೊಂದೇ ಪಾರಿಜಾತಗಳು ಜಾರಿ ಉದುರಿ
ಭೂತದ ನೆರಳುಗಳಿಗೆ ಇಂದು
ಹೊಸರೆಕ್ಕೆ ಕಟ್ಟಿ
ಅಗಲಿಕೆಯ ನೋವು, ವಿರಹದ ಕಾವು
ತುಂಬಿಹ ಬೆಂಗಾಡಿನ
ಮಾಯೆ ಮರುಳಿಗೆ ಹೊತ್ತೊಯ್ಯದಿರಿ

ಬರಗಾಲದ ಬಿರು ಬಿಸಿಲಿಗೆ
ನಿಡುಸುಯ್ದ ಈ ಇಹಕ್ಕೆ
ಮರಳಿ ಅರಳುವ ಬಯಕೆ
ನೀರು ಹುಯ್ಯುವವರಿಲ್ಲ
ಒಂಟಿ ಮರಕ್ಕೆ

ಸಂಜೆ ಗಾಳಿಯ ಹಿತ
ಆಳಕ್ಕೆ ಇರಿದ ಕೆಂಪಿನಲಿ
ಮನಸ್ಸರಳಿ ಹಿತವಾಗಿ ನರಳುತ್ತದೆ
ಅವನೆದೆ ಕಾವಿನಲಿ ಕರಗುತ್ತದೆ
ಸೆಟೆದ ನರನಾಡಿಗಳು ಅದುರಿ
ಹಗುರಾಗಿ ಬಿಡುತ್ತವೆ
ಕೂಡಿ ಕಳೆದುಹೋಗುವ ತವಕದಲಿ
ಕಣ್ಣೆವೆ ಭಾರವಾಗುವ ಹೊತ್ತಲ್ಲಿ
ನಿಮ್ಮ ಒತ್ತಾಸೆಯಿರಲಿ ನನಗೆ

ನನ್ನ ಬಿಡದಿರಿ,ಬಿಡದೆ ಕಾಡದಿರಿ
ಅಣಕಿಸದಿರಿ ನೆನಪುಗಳೆ,

ಕ್ಷಣಭಂಗುರದ ಬದುಕಿನಲಿ

ಜೀವಮುಪ್ಪಿನ ಬಿಸುಪಿನಲಿ

ಬದುಕು -ಚಿತ್ತ ಕದಡಿದ ನೀರು … !

 

‍ಲೇಖಕರು avadhi

July 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: