ನಿನ್ನೆ ಪ್ರಕಟವಾದ ಈ ಮಧುರ ರಾಗವನ್ನು ಸ್ವರ್ಣ ಅವರು ಭಾವವಾಗಿಸಿದ್ದು ಹೀಗೆ…
ಆ ಕಂಗಳಲಿದೆ ಮಧುರವಾದ ಒಂದು ಬಂಧ
ಬಂಧಕ್ಕೆ ಬೇಡ ಹೆಸರ ಬಂಧನ
ಭಾವವೊಂದೇ ಅದರ ಇಂಧನ
ಮಾತಲ್ಲ , ಕೂಗಲ್ಲ
ಅದೊಂದು ನೀಲಾಕಾಶದ ಶುಭ್ರಮೌನ
ಅನುಭವಿಸಿ ಅನುಭಾವಿಯಾಗು
ಆರದು, ಆರಿಸದು, ನಿಲ್ಲದದು
ಯುಗಯುಗಳಿಂದ ಹರಿಯುತ್ತಿರುವ ಅಮೃತ ಬಿಂದು
ಮಂದಹಾಸ ಕಣ್ಣಂಚಿನಲ್ಲಿ
ಬಾಗಿದ ಚಂದ್ರ ಕಿರಣ ರೆಪ್ಪೆಗಳಡಿಯಲ್ಲಿ
ಹೊರಬಾರದು ಮಾತು ತುಟಿಗಳಿಂದಾಚೆ
ಆದರೂ ನಡುಗುವಧರಗಳಲಿದೆ,
ಅದೆಷ್ಟೋ ಮೌನ ಪ್ರೇಮ ಗೀತೆ]]>
Lovely lines..good attempt Swarna!!
dear Avadhi!! lovely pics of Orchids….love those flowers!!
🙂