ಅವಲಕ್ಕಿ
ಬಿ ಎಂ ಬಷೀರ್
ಒಂದು ಮುಷ್ಟಿ ಅವಲಕ್ಕಿ ನೀಡಿದ್ದಕ್ಕೆ ಕೃಷ್ಣ ಕುಚೇಲನಿಗೆ ಶ್ರೀಮಂತಿಕೆಯ ಭಂಡಾರವನ್ನೇ ಕೊಟ್ಟದ್ದು ಊರಿಡೀ ಸುದ್ದಿಯಾಯಿತು.
ಎಲ್ಲರೂ ಅವಲಕ್ಕಿ ಮೂಟೆಗಳೊಂದಿಗೆ ಕೃಷ್ಣನ ಅರಮನೆಯ ಮುಂದೆ ನೆರೆದರು.
ಕೃಷ್ಣ ನಕ್ಕ. “ನಿಮ್ಮ ಅವಲಕ್ಕಿಗೂ ಕುಚೇಲನ ಅವಲಕ್ಕಿಗೂ ವ್ಯತ್ಯಾಸ ಇದೆ” ಎಂದ.
“ಏನದು” ಎಲ್ಲರು ನಿರಾಸೆಯ ದ್ವನಿಯಿಂದ ಕೇಳಿದರು.
“ಒಂದು ಮುಷ್ಠಿ ಅವಲಕ್ಕಿ ಕುಚೇಲನ ಮನೆಯೊಳಗಿದ್ದ ಸರ್ವಸ್ವ ಸಂಪತ್ತಾಗಿತ್ತು. ನೀವು ನನ್ನ ಸ್ನೇಹಕ್ಕಾಗಿ ನಿಮ್ಮ ಸರ್ವಸ್ವ ಸಂಪತ್ತನ್ನು ಒಂದು ಮುಷ್ಟಿಯೊಳಗೆ ತುಂಬಿಸಿ ತಂದರೆ ನನ್ನ ಸ್ನೇಹವನ್ನು ಗಳಿಸಬಹುದು”
ಕೃಷ್ಣಾಷ್ಟಮಿ ಶುಭಾಶಯಗಳು
0 ಪ್ರತಿಕ್ರಿಯೆಗಳು