ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದಣಪೆಯಾಚೆ…' ಅಕ್ಷತಾ




ಅಕ್ಷತಾ ದಟ್ಟ ಅನುಭವಗಳ ಕಾಡಿನಿಂದ ಎದ್ದು ಬಂದ ಹುಡುಗಿ. ಮೆಲುಮಾತಿನಲ್ಲಿಯೇ ತಾನು ಕಂಡುಂಡ ಅನುಭವಗಳನ್ನ್ನು ಬಣ್ಣಿಸಬಲ್ಲವರು. ಅಕ್ಷತಾ ನೇರ ಮಾತಿನ ನಿಷ್ಠುರ ಹುಡುಗಿ.
ಮಯೂರದಲ್ಲಿ ಕಡಿದಾಳ್ ಶಾಮಣ್ಣ ಅವರ ಆತ್ಮವೃತ್ತಾಂತವನ್ನು ಬರೆಯುವುದರ ಮೂಲಕ ಸುದ್ದಿಯಾದ ಅಕ್ಷತಾ ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಕವನ ಸಂಕಲನ ಹೊರ ತಂದಿದ್ದಾರೆ. ಸಂಕಲನದ ಹೆಸರೇ ಅವರ ಕವನಗಳ ಭಿನ್ನ ಹಾದಿಯನ್ನೂ ಸೂಚಿಸುತ್ತದೆ. ‘ಈ ಕವಿಯ ನೋಟದ ಬೀಸು ದೊಡ್ಡದು’ ಎನ್ನುತ್ತಾರೆ ವೈದೇಹಿ ತಮ್ಮ ಬೆನ್ನುಡಿಯಲ್ಲಿ. ‘ಇದು ಹೌದು’ ಎನ್ನುವುದನ್ನು ಇವರು ಆಯ್ದುಕೊಂಡಿರುವ ಕವಿತೆಯ ವಸ್ತುಗಳು ಸೂಚಿಸುತ್ತವೆ.

‘ಬಿರಿದರೆ ಭೂಮಿ ಬಿರಿಯಲಿ
ಎಂದು ನಿಶ್ಚಯಿಸಿದ ನೀವೇ
ದಣಪೆ ದಾಟುವ ಹಂಬಲ
ತೋರದೆ ಓದಿರಿ’
ಎನ್ನುವ ಅಕ್ಷತಾ ಇನ್ನು ಮುಂದೆ ಅವಧಿಯಲ್ಲಿ ಅಂಕಣ ಬರೆಯಲಿದ್ದಾರೆ. ದಣಪೆ ದಾಟಿದ ಅನುಭವವೂ ಇದರಲ್ಲಿರುತ್ತದೆ.
ಮೊದಲ ಬರಹ ‘ಅಯ್ಯೋ ಪಾಪ ಎನ್ನಬೇಡಿರೇ!?…’ಯೊಂದಿಗೆ ಅಂಕಣ ಆರಂಭವಾಗುತ್ತಿದೆ.

‍ಲೇಖಕರು avadhi

6 September, 2008

1 Comment

  1. eshakumar h n

    nimma barahagalige kayuva oduga……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading