ಒಬ್ಬ ರಾಜ
ಇನ್ನಾದರೂ ಹೂವಾಗಿ ಅರಳಬೇಕು ಅಂತ ಒಬ್ಬ ರಾಜ ಬೇರಿಳಿದು ಹೋದ. ಮುಳ್ಳಿನ ಗಿಡ ಹಾದಿಗಡ್ಡ ಅಂತ ಜನ ಕೂಯ್ದು ಎಸೆದರು.
ಗುರು ಮತ್ತು ಶಿಷ್ಯ
ಶಿಷ್ಯ ಸಿಕ್ಕ ಮೊದಲ ದಿನ ಗುರು ಹೇಳಿದ.
“ನಿನ್ನ ಕಾಲಿಗೆ ತಕ್ಕಂತೆ ನಾನು ಎಕ್ಕಡ ಹೊಲಿಯಲ್ಲ. ನನ್ನ ಚಪ್ಪಲಿ ಆಕಾರಕ್ಕೆ ನಿನ್ನ ಕಾಲು ಕತ್ತರಿಸುತ್ತೇನೆ.”
ಇದಾಗಿ ಎಷ್ಟೋ ವರ್ಷಗಳು ಸರಿದವು. ಒಂದು ದಿನ ಗುರುವಿನ ಕಿವಿಗೆ ಕ್ಷೀಣ ದನಿಯೊಂದು ಕೇಳಿಸಿತು.
“ನೀವು ಬರೀ ಕಾಲನ್ನಷ್ಟೇ ಕತ್ತರಿಸುತ್ತೀರಿ ಅಂತ ತಿಳಿದಿದ್ದೆ ಗುರುವೆ.”
ಶಿರವಿಲ್ಲದ ಶಿಷ್ಯ ಕುಸಿದು ಬಿದ್ದ.







0 Comments