ಬೊಳುವಾರು
JUST FOR A CHANGE…?
[SUNDAY TIME PASS]
ಅಂದೊಮ್ಮೆ ’ಮುತ್ತುಪ್ಪಾಡಿ’ಯಲ್ಲಿ ತಾಳಮದ್ದಲೆ. ಮಧ್ಯಾಹ್ನ ಮೂರಕ್ಕೆ ಶುರುವಾಗಬೇಕು. ’ಶೇಣಿ ಗೋಪಾಲ ಕೃಷ್ಣ ಭಟ್ಟರು’ ರಾಮ. ಆದರೆ, ಸೀತೆ’ಯ ಅರ್ಥಧಾರಿ ಕೈಕೊಟ್ಟಿದ್ದರು. ಅನಿರ್ವಾಯವಾಗಿ ಗುಡ್ಡೆ ಶಾಲೆಯ ಹೆಡ್ ಮಾಸ್ಟರ್ ನಾರಾಯಣ ಭಟ್ಟರನ್ನು ’ಸ್ಟೆಪಿನಿ’ ಆಗಿ ಒಪ್ಪಿಸಲಾಗಿತ್ತು. ನಾಲ್ಕಕ್ಕೆ ಗಜಮುಖದವಗೇ…., ಆಯ್ತು. ಬಂಗಾರದ ಜಿಂಕೆಯ ಪ್ರವೇಶವೂ ಅಯಿತು.
ಕತೆಯಲ್ಲಿರುವಂತೆ ಸೀತೆ ತನ್ನ ಡಯಲಾಗ್ ಒಪ್ಪಿಸಿದಳು(ರು).’ಪ್ರಾಣ ಕಾಂತ.. ಜಿಂಕೆ ಬೇಕು’.
ಶ್ರೇಣಿಯವರು ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಹೆಂಡತಿಯ ಕರ್ತವ್ಯಗಳ ಪಟ್ಟಿಗಳನ್ನೆಲ್ಲ ಮುಂದಿಟ್ಟರು.
ಕತೆ ಮುಂದುವರಿಯಬೇಕಲ್ಲ;ಸೀತೆ ತನ್ನ ಬೇಡಿಕೆಯನ್ನು ಎರಡನೆಯ ಬಾರಿ ಮಂಡಿಸಿದಳು(ರು)
ಶ್ರೇಣಿಯವರು ಮತ್ತಿಪ್ಪತ್ತು ನಿಮಿಷಗಳಲ್ಲಿ ಗಂಡನ ಅಧಿಕಾರ ವ್ಯಾಪ್ತಿಯನ್ನೆಲ್ಲ ವಿವರಿಸಿದರು.
ಕತೆಮುಂದುವರಿಯಬೇಕಲ್ಲ; ಸೀತೆ ತನ್ನ ಬೇಡಿಕೆಯನ್ನು ಮೂರನೆಯ ಬಾರಿ ಮಂಡಿಸಿದಳು(ರು)
ಶ್ರೇಣಿಯವವರು ಮತ್ತೊಂದು ಇಪ್ಪತ್ತು ನಿಮಿಷಗಳಲ್ಲಿ ಗಂಡನಿಗೆ ಎದುರಾಡುವ ಹೆಂಡತಿಯರ ಜನ್ಮ ಜಾಲಾಡಿದರು.
…..
…..
ಕತೆ ಮುಂದುವರಿಯಬೇಕಲ್ಲ; ಸೀತೆ ತನ್ನ ಬೇಡಿಕೆಯನ್ನು ಹದಿನೆಂಟನೆಯ ಬಾರಿ ಮಂಡಿಸಿದಳು(ರು).
ಶ್ರೇಣಿಯವರಿಗೆ ತಮ್ಮೆದುರು ಅರ್ಥ ಹೇಳುತ್ತಿರುವ ಬಡಪಾಯಿ ಮಾಸ್ಟರನ್ನು, ಸಾಮಗರೆಂದೇ [ಶ್ರೇಣಿಯವರ ಸರಿ ಸಮಾನ ಅರ್ಥದಾರಿ] ಭಾವಿಸಿದಂತಿತ್ತು. ಮತ್ತೊಂದು ಇಪ್ಪತ್ತು ನಿಮಿಷಗಳ ಕಾಲ…
ಗುಡ್ಡೆ ಶಾಲೆಯ ಹೆಡ್ ಮಾಸ್ಟರ್ ನಾರಾಯಣ ಭಟ್ಟರು ಎರಡೂ ಕೈಮುಗಿದು ಅಳುತ್ತಾ ಹೇಳಿಬಿಟ್ಟರು.
’ ತಪ್ಪಾಯಿತು ಪ್ರಾಣ ಕಾಂತಾ. ನನ್ನನ್ನು ಮನ್ನಿಸು.., ನನಗೆ ಜಿಂಕೆಯ ಸಹವಾಸವೇ ಬೇಡ.
ಶ್ರೇಣಿಯವರ ವಿದ್ವತ್ತಿಗೆ ತಲೆದೂಗುತ್ತಿದ್ದವರಿಗೆಲ್ಲ ವಿದ್ಯುತ್ ಕಂಭವೇ ಬಡಿದಂತಾಗಿತ್ತು!
ಶೇಣಿಯವರಿಗೂ…!
ಕತೆ ಮುಂದುವರಿಯಬೇಕಲ್ಲ..???
Aha, thalamaddaleya Rasaprasanga, nageyukkisithu…..!