-ಸೂತ್ರಧಾರ ರಾಮಯ್ಯ
ಬಾಲಕೃಷ್ಣ: ೨೦೧೦ ಕಾಮನ್ ಫಿಲ್ಥ್ ಗೇಮ್ಸ್ ನ ಓಸಿ (ಆರ್ಗನೈಸಿಂಗ್ ಕಮಿಟಿ) ಚೇರ್ಮನ್ ಮತ್ತು ಓಸಿ ಮೆಂಬರ್ಗಳನ್ನೇ ನೇಮಿಸಿ ಕೊಂಡು ಭಾರತದಲ್ಲಿ ಒಲಿಂಪಿಕ್ಸ್ ನಡೆಸಿದರೆ, ಎಲ್ಲಾ ಗೋಲ್ಡ್ ಮೆಡಲುಗಳು ನಮ್ಮದೇ; ಇದಕೆ ಸಂಶಯವಿಲ್ಲ. ಏನಂತಿ? ನರಸಿಂಹರಾಜು: ಅಲ್ಲಯ್ಯಾ, ವಿಶ್ವದ ಅಗ್ರಮಾನ್ಯ ಆಟಗಾರರ ಜತೆ ಹೋರಾಡಿ ನಮ್ಮವರು ಗೆಲ್ಲಲು ಸಾಧ್ಯವೇ ಅಂತ? ಬಾಲಕೃಷ್ಣ: ಹೋರಾಡಿ ಅನ್ನೋ ಪ್ರಶ್ನೇನೆ ಇಲ್ಲಾ .ಸ್ಟೇಡಿಯಂಗಳು, ಟ್ರ್ಯಾಕ್ ಗಳು,ಈಜು ಕೊಳಗಳಲ್ಲಿರೋ ‘ರಾಡಿ’ ನೋಡಿಯೇ ವಿದೇಶಿ’ತಂಡ’ ಗಳು ಇಲ್ಲಿಗೆ ಬರೋದಿಲ್ಲಾ. ಅಂದಮೇಲೆ ಉಳಿಯೋರು ನಾವೇ. ಗೋಲ್ ಡೆಲ್ಲಾ ನಮ್ಮದೇ! ರಾಡಿಯನ್ನು ಎತ್ತಿ ತೋರಿಸೋ ಮೀಡಿಯಾಗಳ್ಗೂ ಒಂದೊಂದ್ ಚಿನ್ನದ ಪದಕ ಕೊಡಬಹುದು. ಹಾಗೇ ಒಂದಕ್ಕೆ ಹತ್ತರಷ್ಟು ಬಿಲ್ ಮಾಡಿ, ಸಭ್ಯತೆಗಳ ಜೊತೆ-ನಡೆಯೋ ಕಾರ್ಪೆಟ್ ನಿಂದ, ಹಾಸಿಗೆ ದಿಂಬುಗಳನೆಲ್ಲ ಮಣ್ಮಾಡಿ, ಅದರಲ್ಲಿಯೂ ಸಾಕಷ್ಟು ದುಡ್ ಮಾಡಿ ‘ಹಾವು’ ಹೂ! ಅಂತಾ ‘ಸರ್ಪ ಸ್ವಪ್ನ’ ರಾಗೋ ಓಸಿ ಕಮಿಟಿಯವರಿಗೂ ಪನ್ದ್ಯಗಳು ಮುಗಿದಮೇಲೆ ‘ಭಾರತ ರತ್ನ’ ಕೊಡಬಹುದು.]]>ಹೋ-ರಾಡಿ ಗೆಲಿವುದನರಸ ಕೇಳೆಂದ…
ನಿಮಗೆ ಇವೂ ಇಷ್ಟವಾಗಬಹುದು…






The author’s opinion about the OC might be right, but his thoughts show disrespect to Indian sportsmen/women who have performed exceptionally well in the CWG.