ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೂ ಉಂಟೇ..!

ರಾಮಚಂದ್ರದೇವ

ದೇವಸಾಹಿತ್ಯ

ಇದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಪತ್ರ. ಪತ್ರವೇ ಸೂಚಿಸುವಂತೆ ಗಂಗಾಧರ ಮಡಿವಾಳೇಶ್ವರ ತುರಮುರಿಯವರ ಪುಸ್ತಕವನ್ನು ಪ್ರತಿ ಮಾಡಿ ಯಾರೋ ಒಬ್ಬ ತನ್ನದೆಂದು ಪ್ರಕಾಶಕರಾದ ಅಭಿನವ ಪ್ರಕಾಶನಕ್ಕೆ ಕಳಿಸಿದ್ದಾರೆ. ಮಾಲೀಕರಾದ ರವಿ ಕುಮಾರ್ ಅದನ್ನು ಪ್ರಕಟಿಸಿದ್ದಾರೆ. ಈಗ ಮೂರು ಮುದ್ರಣ ಆದ ಮೇಲೆ ಅದು ಹಿಂದೆ ಪ್ರಕಟವಾದ ಗಂಗಾಧರ ಮಡಿವಾಳೇಶ್ವರ ತುರಮುರಿಯವರ ಪುಸ್ತಕದ ಪ್ರತಿ ಎನ್ನುವುದು ಗೊತ್ತಾಗಿದೆ. ರವಿ ಅದಕ್ಕಾಗಿ ಕ್ಷಮೆ ಯಾಚಿಸಿದ್ದು ಮಾತ್ರವಲ್ಲದೆ ಈಗ ಮಾರುಕಟ್ಟೆಯಲ್ಲಿ ಉಳಿದಿರುವ ಪ್ರತಿಗಳನ್ನು ವಾಪಾಸು ಪಡೆಯಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅದಕ್ಕೆ ಬೇಕಾದ ವ್ಯವಸ್ಥೆ ಅವರು ಮಾಡಲಿದ್ದಾರೆ. ಅವರಿಗೆ ನನ್ನ ಅಭಿನಂದನೆ ಹೀಗೆ ಪ್ರತಿಗಳನ್ನು ವಾಪಸು ಪಡೆಯಲು ನಿರ್ಧರಿಸಿದ್ದರ ಬಗ್ಗೆ. ಇದು ದಿಟ್ಟ ನೈತಿಕ ನಿರ್ಧಾರ. ದೊಡ್ಡ ಅಭಿರುಚಿಯ ಘನಸ್ಥ ಪ್ರಕಾಶಕರು ಮಾತ್ರ ಇಂಥಾ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದ ಅವರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಆದರೆ ಅವರು ಈ ಮೂಲಕ ಆರೋಗ್ಯಕರ ಬೌದ್ಧಿಕ ವಾತಾವರಣಕ್ಕೆ ಬೇಕಾದ ಮುಖ್ಯ ಮೇಲ್ಪಂಕ್ತಿ ಹಾಕುತ್ತಿದ್ದಾರೆ. ಯಾಕೆಂದರೆ ಇಂಥಾ ತಪ್ಪುಗಳನ್ನು ಸರಿಯೆಂದು ಸಮರ್ಥಿಸಿಕೊಳ್ಳುವವರ ಪಡೆಯೇ ಇದೆ. ಸಾರಾ ಅಬೂಬಕ್ಕರ್ ಅವರ ಚಂದ್ರಗಿರಿಯ ತೀರದಲ್ಲಿ ಕದ್ದು ಸಿನೆಮಾ ಮಾಡಿದ್ದನ್ನು ಒಬ್ಬ ಕವಿ-ಪತ್ರಕರ್ತ ಲೇಖನ ಬರೆದು ಸಮರ್ಥಿಸಿಕೊಂಡರು. ಬ್ರೆಕ್ಟಿನ ತ್ರಿ ಪೆನ್ನಿ ಅಪೆರಾ ಆಡಲು ಕಾಪಿರೈಟ್ ಹೊಂದಿದವರ ಒಪ್ಪಿಗೆ ಸಿಕ್ಕಲಿಲ್ಲವೆಂದು ಬ್ರೆಕ್ಟಿನ ಹೆಸರು ಹೇಳದೆ ಆಡಿದ್ದನ್ನು ಸಮರ್ಥಿಸಿಕೊಂಡ ಲೇಖನವೊಂದನ್ನು ಓದಿದ್ದೆ. ಅದರ ಲೇಖಕ ಭಾರತೀಯ ರಂಗಭೂಮಿಗೆ ಸಂಬಂಧಿಸಿದ ಸುಧನ್ವ ದೇಶಪಾಂಡೆ. ನನ್ನ ಹ್ಯಾಮ್ಲೆಟ್ ಅನುವಾದವನ್ನು ರಂಗಕರ್ಮಿ ಪ್ರಸನ್ನ ತನ್ನದೆಂದು ಹೇಳಿಕೊಂಡು ಆಡಿಸಿ ಪ್ರಕಟಿಸಿದಾಗ ನಾನು ಇರುವ ವಿಷಯ ಬಹಿರಂಗಪಡಿಸಿ ಕರಪತ್ರ ಹಂಚಿದ್ದೆ. ಆಗ ನನ್ನ ಬೆಂಬಲಕ್ಕೆ ಆ ಅನುವಾದದ ಪ್ರಕಾಶಕರು ತುಂಬಾ ತಡವಾಗಿ ಬಂದರು–ಅದೂ ಖಾಸಗಿಯಾಗಿ; ಸಾರ್ವಜನಿಕ ಹೇಳಿಕೆ ಮೂಲಕ ಅಲ್ಲ. ಪ್ರಕಾಶಕರ ಬೆಂಬಲ ಇಲ್ಲ ಎಂದಾದರೆ ಇಂಥಾ ಪ್ರಕರಣಗಳು ಸಹಜವಾಗಿಯೇ ಕಮ್ಮಿಯಾಗುತ್ತವೆ. ಇಂಥಾ ಕಾರಣಕ್ಕಾಗಿಯೋ ಏನೋ–ಇಂಗ್ಲೆಂಡಿನಲ್ಲಿ Playwrights Against Directors ಎಂಬ ಸಂಸ್ಥೆಯೇ ಹುಟ್ಟಿಕೊಂಡಿದೆ. ನಾಟಕ ಕೃತಿಗಳನ್ನು ಬೇಕಾಬಿಟ್ಟಿ ಆಡುವ ನಿರ್ದೇಶಕರಿಂದ ನಾಟಕಕಾರರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಇರುವ ಸಂಸ್ಥೆ ಇದು. ಒಬ್ಬ ಲೇಖಕ ನಿಧನವಾದ ನಂತರ ಅರುವತ್ತು ವರ್ಷಗಳ ವರೆಗೆ ಮಾತ್ರ ಅವರ ವಾರಸುದಾರರಿಗೆ ಕೃತಿಸ್ವಾಮ್ಯ ಇರುತ್ತದೆ. ತುರಮುರಿಯವರು ನಿಧನರಾಗಿ ಅರುವತ್ತು ವರ್ಷ ಕಳೆದಿದ್ದರೆ ರವಿ ಕುಮಾರ್ ಅವರ ಪುಸ್ತಕದ ಪುನರ್ಮುದ್ರಣಕ್ಕೆ ವಾರಸುದಾರರ ಒಪ್ಪಿಗೆ ಕೇಳಬೇಕಾಗಿಲ್ಲ. ಆದರೆ ಅವರನ್ನು ಒಳಗೊಳ್ಳುವುದು ಸೌಜನ್ಯ. ಈ ದೃಷ್ಟಿಯಲ್ಲಿಯೂ ರವಿ ಕುಮಾರ್ ನಿಲುವು ಸರಿಯಾಗಿದೆ.  ]]>

‍ಲೇಖಕರು G

12 April, 2012

2 Comments

  1. D.RAVI VARMA

    ಸರ್,ನ .ರವಿಕುಮಾರ್ ತುಂಬಾ ಅರ್ಥಪೂರ್ಣ ಕೆಲಸ ಮಾಡಿದ್ದೆರಿ,ಈಗ ಇಲ್ಲಿ ಮನುಸ್ಯ ತನ್ನ ಮಾನವೀಯತೆಯನ್ನೇ ಕಳೆದುಕೊಂಡು ಹಣ ,ಪ್ರತಿಷ್ಟೆ ಹಾಗು ಸ್ವಾರ್ಥದ ಹಾದಿಯಲ್ಲಿದ್ದಾನೆ. ನೀವು ಎಂದೋ ಗೊತ್ತಿಲ್ಲದೇ ಮಾಡಿದ ತಪ್ಪನ್ನು ಒಪ್ಪಿಕೊಂಡು,ಮೂಲ ಬರಹಗಾರರಿಗೆ ಗೌರವ ಹಾಗು ಬರಹಗಾರರ ಮನೆಯವರಿಗೆ ನಿಮ್ಮ ಪ್ರಾಮಾಣಿಕ ನಿಲುವು ವ್ಯಕ್ತಪಡಿಸಿದ್ದು ನನಗಂತೂ ತುಂಬಾ ಕುಸಿಯಾಯ್ತು ,ನಿಮ್ಮ ಪ್ರಕಾಶನಕ್ಕೆ ನಿಮ್ಮ ಬದ್ದತೆಗೆ,ನಿಮ್ಮ ಜೀವನ ಪ್ರೀತಿಗೆ ಅಭಿನಂದನೆಗಳು
    ರವಿವರ್ಮ ಹೊಸಪೇಟೆ .

  2. veeranna madiwalara

    ಕೃತಿ ಪ್ರಕಟವಾಗಿ ಅರವತ್ತು ವಷ೵ ಕಳೆದ ಮೇಲೆ ವಾರಸುದಾರರ ಒಪ್ಪಿಗೆ ಕೇಳಬೇಕಿಲ್ಲ,ಸರಿ. ಆದರೆ ಕತೃವಿನ ಹೆಸರನ್ನು ಬದಲಾಯಿಸುವುದು ಯಾವ ನ್ಯಾಯ? ಹೀಗಾಗಬಾರದಲ್ಲವೆ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading