ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಂಪಿ ವಿ ವಿ ಹೋರಾಟದ ಬಗ್ಗೆ ವಿವೇಕ ರೈ

ಕರ್ನಾಟಕದ ಮುಖ್ಯಮಂತ್ರಿಯವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಎಂಬತ್ತು ಎಕರೆ ಜಾಗವನ್ನು ವಿಜಯನಗರ ಟ್ರಸ್ಟಿಗೆ ಹಸ್ತಾಂತರಿಸುವ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ. ಕನ್ನಡಿಗರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ಕನ್ನಡ ವಿವಿಯ ಅಧ್ಯಾಪಕರು ಮತ್ತು ನೌಕರರು ತುಂಬಾ ಧೈರ್ಯ ತಾಳಿ, ನೇರವಾಗಿ ಪ್ರತಿಭಟಿಸಿರುವುದು ಐತಿಹಾಸಿಕವಾದುದು. ಅದು ಎಂತಹ ಅಪಾಯಕಾರಿ ಹೆಜ್ಜೆ ಎನ್ನುವುದು ವಿವಿಗಳಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಅರ್ಥ ಆಗುವಂಥದ್ದು. ಕರ್ನಾಟಕ ಪ್ರಜ್ಞಾವಂತರು ಬಹುಪಾಲು ಒಂದೇ ಧ್ವನಿಯಲ್ಲಿ ಮಾತಾಡಿದ್ದು ಇತ್ತೀಚೆಗಿನ ದಿನಗಳಲ್ಲಿ ಒಂದು ಅಪೂರ್ವ ಸಂಗತಿ.

ಸರಕಾರಗಳು ವಿವಿಗಳ ಆಡಳಿತದಲ್ಲಿ ಪರೋಕ್ಷವಾಗಿ ಹಸ್ತಕ್ಷೇಪ ಮಾಡುವ ನಿದರ್ಶನಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗುತ್ತಿದೆ. ಕರ್ನಾಟಕ ರಾಜ್ಯ ವಿವಿಗಳ ಕಾಯಿದೆ ೨೦೦೦ ರ ಬಳಿಕ ಇದರ ಪ್ರಮಾಣ ಅಧಿಕ ಆಗಿದೆ. ಸಾಹಿತ್ಯ , ಶಿಕ್ಷಣ ಮತ್ತು ಸಂಸ್ಕೃತಿ -ಈ ಕ್ಷೇತ್ರಗಳಲ್ಲಿ ಯಾವುದೇ ಸರಕಾರ ಇದ್ದಾಗಲೂ ಸ್ವಾಯತ್ತೆ ಮತ್ತು ಸ್ವಾಭಿಮಾನ ಉಳಿಸಿಕೊಂಡು -ಕರ್ನಾಟಕ ರಾಜ್ಯವು  ದೇಶದಲ್ಲೇ ಉತ್ತಮ  ಹೆಸರು ಪಡೆದಿದೆ. ಇದು ಕರ್ನಾಟಕಕ್ಕೇ ಹೆಮ್ಮೆ ಮತ್ತು ಗೌರವದ ವಿಷಯ. ಇದನ್ನು ಆಳುವ ಸರಕಾರಗಳು ಅರ್ಥ ಮಾಡಿಕೊಂಡರೆ ಅವುಗಳಿಗೆ ಲಾಭ; ಅದನ್ನೇ ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ಒಳ್ಳೆಯ ಅವಕಾಶ ಇದೆ. ಈ ಅನುಕೂಲ ದೇಶದ ಅನೇಕ ರಾಜ್ಯಗಳಿಗೆ ಇಲ್ಲ.
ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ಭಿನ್ನ ಅಭಿಪ್ರಾಯಗಳನ್ನು ವಿರೋಧ ಎಂದು ಆಳುವವರು ಭಾವಿಸಬಾರದು.ಒಂದು ಸಂಗತಿಗೆ ಒಂದು ಸಮಸ್ಯೆಗೆ ಸರಿಯಾದ ಒಂದು ಪರಿಹಾರ ಕಂಡುಕೊಂಡರೆ ಆಯಿತು. ಅದು ಯಾರ ವಿಜಯವೂ ಅಲ್ಲ, ಸೋಲೂ ಅಲ್ಲ. ಸಂಸ್ಥೆಗಳ ಮುಂದಿನ ಪ್ರಗತಿಗೆ ಎಲ್ಲರೂ ಸೇರಿ ಸೌಹಾರ್ದತೆಯಿಂದ ಕೆಲಸ ಮಾಡಬೇಕು. ನಮ್ಮ ಒಂದು ನಿಲುವನ್ನು ಬಿಟ್ಟುಕೊಟ್ಟು ಸಾರ್ವಜನಿಕ ಅಭಿಪ್ರಾಯವನ್ನು ಮನ್ನಿಸುವುದು ಆಡಳಿತಗಾರರ ನೈತಿಕ ಗೆಲುವು ಎಂದೇ ಭಾವಿಸಬೇಕು. ಅಂತಹ ಸಮನ್ವಯದ ಹೆದ್ದಾರಿಗೆ ಸ್ವಾಗತ ಕೋರೋಣ.
ಈ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದಿನ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ.
ಮುಂದಿನ ಓದಿಗೆ ಭೇಟಿ ಕೊಡಿ – ಬಿ ಎ ವಿವೇಕ ರೈ

‍ಲೇಖಕರು avadhi

12 March, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading