ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂತ್ರಧಾರ ರಾಮಯ್ಯ ಕಣ್ಣಲ್ಲಿ ಕಾವೇರಿ..

eye ಇಲ್ಲದ ಐತೀರ್ಪು! ಒಂದು ಹಳೆ ಹಳಿಕೆ

– ಸೂತ್ರಧಾರ ರಾಮಯ್ಯ

ಅಂದಿನ ಆಂಗ್ಲರ ‘ಲೋಪ’ ಕ್ಕೆ

ಇಂದಿನ ಐತೀರ್ಪಿನ ‘ಮುದ್ರೆ’ಯೇ?

ಹೇಳಮ್ಮ ‘ಲೋಪಮುದ್ರೆ’.

ಇದು ಸರಿಯೇ ಕಾವೇರಿ ತಾಯೆ?

ಹುಟ್ಟಿ ಬೆಳೆದ ಮನೆಗೆ ೨೭೦ ಟಿ ಎಂ ಸಿ!

ನೆರಮನೆಗೆ ೪೨೦-೧ (೪೧೯) ಟಿ ಎಂ ಸಿಯೆ?

ಏನನ್ನಬೇಕು; ಎಷ್ಟು ಅನ್ನ ಬೇಕು ?

ಹೆತ್ತವರಿಗೆ ಒಪ್ಪತ್ತು ಅನ್ನ (ಒಂದೇ ಬೆಳೆ)

ಹೆರವರಿಗೆ ಮೂರುಹೊತ್ತು ಮೃಷ್ಟಾನ್ನ ( ಮೂರು ಬೆಳೆ)

ನೀವೇ ನೋಡಿಸ್ವಾಮಿ; ಅನ್ಯಾಯವನ್ನ!

ಯಾ.ಕ. ಬೇಕ – ಯಾದವೀ ಕಲಹ?

ನ್ಯಾ ಯಾದಿಕರಣ ನಮ್ಮ ಹಕ್ಕಿನ ಹರಣ!

ದಾಯಾದಿ ಮತ್ಸರಕೆ ಆಹ್ವಾನ;

ಯಾದವೀ ಕಲಹಕ್ಕೆ ಸೋಪಾನ?

ಕೊಲ್ಲಿ ದುರಾಸೆ.

ಮೂಡುವುದು ನೆಮ್ಮದಿ ಕಾವೇರಿ ಕಣಿವೆಗೆ,

ಎಸೆದಾಗ ಐತೀರ್ಪು ಬಂಗಾಳ ಕೊಲ್ಲಿಗೆ.

ಜಸ್ಟೀಸ್ ನ್ಯಾಚುರಲ್ .

ಈ ನೆಲದಿ ಸುರಿವ ಮಳೆ, ಹರಿವ ಜಲ ನಮ್ಮದಯ್ಯಾ,

ಇಳೆಯ ಜಾಣರು ಅನುವರಿದಕೆ ‘ನಿಸರ್ಗ ನ್ಯಾಯ’

ತಮಿಳು ನಾಡಿಗೆ ಕೊಟ್ಟರು justice-o.k

ಕನ್ನಡ ನಾಡ ಕೈಲಿಟ್ಟರು just-ice ಯಾಕೆ?

ಟಿ.ಎನ್ಗೆ ರಿವಾರ್ಡು, ಕೆ.ಎನ್ಗೆ ವಾರ್ಡು! ತ್ರಿಬುನಲ್ ಅವಾರ್ಡು?

ಕಾವೇರಿ ಕಣಿ-ವೆಯಲೆಂದೂ ಸಾವಿರದ ತಕರಾರು,

ಸಾವಿರ ಪುಟಗಳಲಿ ಗೀಚಿದರು ಕಾವೇರಿಸೋ ಕರಾರು.

ಕೇಂದ್ರ ಸರ್ಕಾರಗಳ ಒತ್ತೆ ಇಟ್ಟುಕೊಂಡು ನೀರುಕೊಡಿ

ಅನುವರಲ್ಲಾ ಯಾರಪ್ಪನ್?

‘ಅಣ್ಣ’ ನನು ಹಿಡಿದಿಟ್ಟು ಅದನೆ ಕೇಳಿದ್ದನಲ್ಲಾ- ವೀರಪ್ಪನ್!

ಪ್ರಶ್ನಿಸಲಿಲ್ಲಾ ಪಾಪ! ಅಂದು ‘ವಸಾಹತು’ಶಾಹಿ;

ಸ್ವಾತಂತ್ರ್ಯ ಬಂದ ಮೇಲೂ ನೀರು ಅನ್ಯರ ‘ವಶ ಆತು’ ತಾಯಿ!

‍ಲೇಖಕರು G

8 October, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading