ಕನ್ನಡ ಹಿತ ಮರೆತ ಕನ್ನಡ ಸಾಹಿತ್ಯ ಸಮ್ಮೇಳನಾಚರಣೆ ಅನೈತಿಕ

ಕೆ ಪಿ ನಟರಾಜ
ಕನ್ನಡ ಮಾಧ್ಯಮ ದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯ ಕತ್ತಲಲ್ಲಿದೆ.
ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ 5 ಲಕ್ಷ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡದೆ ನಿಡುಗಾಲದಿಂದ ವಂಚಿಸಲಾಗುತ್ತಿದೆ. ಈ ನೆಲದ ಮಕ್ಕಳ ಬಾಳನ್ನು ಹಾಳುಮಾಡಲಾಗುತ್ತಿದೆ. ಶೇ 65 ರಷ್ಟಿರುವ ಈ ಬಹುಸಂಖ್ಯಾತ ವಿದ್ಯಾರ್ಥಿಗಳು SSLC ನಂತರ ಅಕಾಲದಲ್ಲಿ ತಮ್ಮ ಶಿಕ್ಷಣವನ್ನು ಕೊನೆಗೊಳಿಸಿ ಬೀದಿಪಾಲಾಗುತ್ತಿದ್ದಾರೆ.
ಇದರಿಂದ ಕನ್ನಡ ಭಾಷೆ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಪರಸ್ಪರ ಸಂಬಂಧಿತವಾದ ಈ ಕನ್ನಡದ ಅಸ್ತಿತ್ವದ ಪ್ರಶ್ನೆಯನ್ನು ನಿರ್ಲಕ್ಷಿಸಿರುವುದು ಅಕ್ಷಮ್ಯ ಸಂಗತಿಯಾಗಿದೆ
ಈ ದೌರ್ಜನ್ಯಕ್ಕೆ ಕುರುಡಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧಿಕ್ಕರಿಸಿ
ನಾನು ಈ ಸಮ್ಮೇಳನದಲ್ಲಿ ಭಾಗವಹಿಸದೆ ಧಿಕ್ಕರಿಸುತ್ತೇನೆ.
ಈ ಸಮ್ಮೇಳನಾಚರಣೆಯ ನೈತಿಕತೆಯನ್ನು ಪ್ರಶ್ನಿಸುತ್ತೇನೆ





0 Comments