ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯ "ಸಂತೆ"ಯಲ್ಲಿ ನಾನು ಕಂಡದ್ದು

-ರವಿಶಂಕರ್  ಕೆ ಭಟ್

1. ಒಳಗೆ ಹೋಗುತ್ತಿದ್ದವರ ಪೈಕಿ ಹೆಚ್ಚಿನವರಿಗೆ ಯಾಕೆ ಮತ್ತು ಎಲ್ಲಿಗೆ ಹೋಗುತ್ತಿದ್ದೇವೆ ಅನ್ನೋದು ಗೊತ್ತಿರಲಿಲ್ಲ. ಹೋದ ಮೇಲೆ ಏನು ಮಾಡಬೇಕು ಅನ್ನೋದೂ ಅಷ್ಟೆ. ನನಗೂ ಹಾಗೆಯೇ ಆಯಿತು. 2. ಇನ್ನು ಸಭೆಯಲ್ಲಿ ಶೇ.70ಕ್ಕೂ ಹೆಚ್ಚು ಮಂದಿ ತಂತಮ್ಮ ಗುಂಪಿನಲ್ಲೇ ಕಳೆದು ಹೋಗಿದ್ದರು. ಅಥವಾ ಪತ್ರಿಕೆಯೋ, ಪುಸ್ತಕವೋ ಓದುವುದರಲ್ಲಿ ತಲ್ಲೀನರಾಗಿದ್ದರು. ಇದಕ್ಕೆ ವೇದಿಕೆಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಮುಂದಿನ ಕೆಲ ಸಾಲಿನಿಂದ ಈಚೆಗೆ ತಲುಪುತ್ತಿರದಿದ್ದುದು ಇದಕ್ಕೆ ಕಾರಣವಿರಬಹುದು. ಮಿತ್ರ ಗಾಣಧಾಳು ಶ್ರೀಕಂಠನ ಗೋಷ್ಠಿಗೆ ಹೋಗಿ ಏನೂ ಕೇಳಿಸದೆ ಹಿಂದಿರುಗುವ ಕರ್ಮ ನನ್ನದಾಯಿತು. 3. ಅತ್ತ ಪುಸ್ತಕ ಮಳಿಗೆಗಳಲ್ಲಿ ಯಾರೂ ಕಳೆದುಹೋದ ಬಗ್ಗೆ ಇನ್ನೂ ಯಾವುದೇ ವರದಿ ಬಂದಿಲ್ಲ. ಅಲ್ಲಿ ಇತ್ತೀಚಿನ ಶಬರಿಮಲೆ ರೀತಿಯ ದುರಂತ ಸಂಭವಿಸದಿರಲಿ ಅಂತ ಮನಸ್ಸು ಪ್ರಾರ್ಥಿಸುತ್ತಿತ್ತು. 4. ಕೆಲ ಪುಸ್ತಕ ಮಳಿಗೆಗಳಲ್ಲಂತೂ ಅವ್ಯಾಹತವಾಗಿ ಪುಸ್ತಕಗಳ ಕಳ್ಳತನವಾಗುತ್ತಿದ್ದದ್ದು ನೋಡಿ “ಸಾಹಿತ್ಯಪ್ರೀತಿ” ಅಂದರೆ ಇದೇನಾ ಅಂತ ಪ್ರಶ್ನಿಸಿಕೊಳ್ಳುವಂತಾಯಿತು. 5. ಇಷ್ಟಾದ ಮೇಲೂ ಉಳಿದ ಕಡೆಗೆ ಕಾಲು ಹಾಕುವ ಸಾಹಸ ಮಾಡಲು ಮನಸ್ಸೇ ಆಗಲಿಲ್ಲ. 6. ಈ ಎಲ್ಲಾ ಕಾರಣಕ್ಕಾಗಿ ಸುರಕ್ಷಿತವಾಗಿ ಹೊರ ಬಂದ ಹೆಚ್ಚಿನವರ ಗತಿ ಸದ್ಯ ಬದುಕಿದೆ ಅನ್ನುವಂತಾಗಿತ್ತು.]]>

‍ಲೇಖಕರು avadhi

5 February, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading