ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮಸ್ಯೆಯಲ್ಲಿದ್ದಾರೆ ಮಮತಾ..

ಪ್ರಿಯ ಸ್ನೇಹಿತರೆ,
ನನ್ನ ಕವನ ಸಂಕಲನ “ಸಂತೆ ಸರಕು”ಗೆ ಕಲಾವಿದರಾದ ಅರುಣ್ ಕುಮಾರ್ ಕವರ್ ಪೇಜ್ ಮಾಡಿದ್ದಾರೆ.

ಯಾವುದು ಸೂಕ್ತ ಸೂಚಿಸುವಿರ ?

-ಮಮತಾ ಅರಸೀಕೆರೆ 

mamatha-arasikere1 mamatha-arasikere2

mamatha-arasikere3

‍ಲೇಖಕರು Admin

20 September, 2016

9 Comments

  1. ನಾಗರಾಜ್ ಹರಪನಹಳ್ಳಿ

    ಕೊನೆಯದು. ಬಣ್ಣ ಮತ್ತು ಚಿತ್ರ ಹಲವು ಅರ್ಥಗಳ ಜೊತೆ ವ್ಯಾಪಕ ಧ್ವನಿಹೊಂದಿದೆ.

    • Anonymous

      Thank you

  2. Sangeeta Kalmane

    ಎರಡನೆಯದು. ಏಕೆಂದರೆ ಇಂದು ಹೆಣ್ಣು ಸಂತೆಯಲಿ ಸಿಗುವ ಸರಕಾಗಿದ್ದಾಳೆ. ಮಂಚದ ಮೂಲೆಯಲ್ಲಿ ಕುಳಿತು ಗೊತ್ತಿಲ್ಲದ ಅಮಾಯಕನಿಗೆ ಮೈ ಹಂಚಿಕೊಳ್ಳಬೇಕಾದ ನೋವಿನ ತುಡಿತವಿದೆ. ಕರುಳು ಹಿಂಡುವ ಈ ಗತಿ ಇಂದೇ ಕೊನೆಯಾಗಲಿ ಅನ್ನುವ ಭಾವನೆ ಹೊತ್ತ ಕವನ ನಿಮ್ಮ ಪುಸ್ತಕದಲ್ಲಿ ಇರಬಹುದೆನ್ನುವ ನಂಬಿಕೆ ನನ್ನದು. ಗೆಳತಿ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ಅಭಿನಂದನೆ. ಶುಭವಾಗಲಿ

    • Anonymous

      Thank you

  3. Sathyakama Sharma Kasaragodu

    ಲೇಔಟ್ ತಜ್ಞರ ಭಾಷೆಯಲ್ಲಿ ಹೇಳುವುದಾದರೆ ಕೊನೆಯದ್ದರಲ್ಲಿ ಎಲ್ಲವೂ ಬ್ಯಾಲನ್ಸ್ಡ್ ಆಗಿದೆ.

    • Anonymous

      Thank you 🙂

  4. Anonymous

    ಮೂರನೆಯದು . ಚಿತ್ರ , ಬಣ್ಣ ನೋಡಲು ಹಿತವಾಗಿದೆ .

    • Anonymous

      Thank you

  5. ಸಂಗಾಮಿತ್ರ ಡಿಗ್ಗಿ

    “ಏಕೆಂದರೆ ಇಂದು ಹೆಣ್ಣು ಸಂತೆಯಲಿ ಸಿಗುವ ಸರಕಾಗಿದ್ದಾಳೆ”
    ಸಂಗೀತಾ ಕಳ್ಮನೆಯವರ ಮಾತಿಗೆ ನನ್ನ ವಿರೋಧ. ಹೆಣ್ಣು ಸರಕಾಗಿದ್ದಾಳೆನೋ ನಿಜ. ಆದರೆ ಮಾಡಿದ್ದು ಯಾರು? ನಾವುಗಳೇ ತಾನೆ.
    ಉದಾಹರಣೆಗೆ ಉಗುರಿಗೆ ಹಚ್ಚುವ ಬಣ್ಣದ ಜಾಹೀರಾತಿಗೂ ಅವಳ ಇಡೀ ನಡುವಿನ ಸೌಂದರ್ಯ ತೋರಿಸುವ ಅಗತ್ಯವೇನಿದೆ. ಅದು ನೋಡುಗರ ಮೇಲೆ ನಿಂತಿದೆ ಎಂದು ಹೇಳಬಹುದು. ಅಥವಾ ಕಂಪೆನಿಗಳು ದುಡ್ಡು ಮಾಡುವ ಬಗೆ ಎನ್ನಬಹುದು. ಸಿಂಪಲ್ ಆಗಿ ವಿಚಾರ ಮಾಡಿ, “ಅದು” ಕೂಡ ಅವಳ ಜೀವನವೇ ತಾನೆ.
    ಕೆಲವು ಕಥೆ, ಕವಿತೆಗಳಲ್ಲಿ ಹೆಣ್ಣಿನ ತೊಗಲಿನ ವ್ಯಾಪಾರ ಚನ್ನಾಗಿ ಮೂಡಿ ಬರುತ್ತದೆ. ಯಾಕೆಂದರೆ ಖಾಲಿ ಹಾಳೆಯಲ್ಲಿ ಏನನ್ನಾದರೂ ಗೀಚಬಹುದು. ನಿಜ ಸ್ಥಿತಿ ಗಮನಿಸಿದರೆ ಆ ಹೆಣ್ಣಿನ ಅಂತರಂಗದ ಆಳವನ್ನು ಕೆದಕಿ ನೋಡಲು ಆಗುವುದಿಲ್ಲ. ಅವಳದೇ ಆದ ಭಾವನೆಗಳಿವೆ. ಕೊಟ್ಟ ಹಣಕ್ಕೆ ಗಿರಾಕಿಯನ್ನು ತೃಪ್ತಪಡಿಸುವಂತ ತಾಯಿಯಂತ ಗುಣವು ಇದೆ. ಅವಳನ್ನು ಈ ಸ್ಥಿತಿಗೆ ತಂದ ಸಮಾಜದ ಬಗ್ಗೆ ಒಡೆಯಲಾರದಂತ ದುಃಖದ ಮೊಟ್ಟೆಯೂ ಅವಳ ಗರ್ಭದಲ್ಲಿದೆ.
    ಕರಳು ಹಿಂಡುವ ಈ ಕಥೆ ಇಂದೇ ಕೊನೆಯಾಗಲಿ ಎನ್ನುವ ಬದಲು ಅವರಿಗೂ ಬದುಕುವ ಹಕ್ಕನ್ನು ನೀಡಬೇಕು ಎನ್ನುವ ಆಶಾಭಾವನೆ ನಮ್ಮಲ್ಲಿ ಮೂಡಿಬರಬೇಕಷ್ಟೆ.
    ಹಿಂದಿನ ದೇವದಾಸಿ ಪದ್ದತಿಯಂತೆ ಬಲವಂತವಾಗಿ ನೂಕಿದರೆ ಅದು ನಮ್ಮ ತಪ್ಪು. ಆದರೆ ಈ ದಾರಿ ಮಾತ್ರ ಗೊತ್ತಿರುವವರಿಗೆ ಅದೇ ಅವರ ಜೀವನವಾಗಿರುತ್ತದೆ. ಅದನ್ನು ಬಿಟ್ಟು ಬೇರೆ ಕೆಲಸ ಮಾಡಿ ಎಂದು ಸಲಹೆ ಕೊಡಬಹುದು. ಆದರೆ ಕೊಡುವವರು ಯಾರಿದ್ದಾರೆ..?
    ಈ ಗಂಡಸರು ಹೀಗೆ.
    ಹೆಣ್ಣಿನ ಬಗ್ಗೆ ಹೀಗೆ ಮಾತನಾಡುತ್ತಾರೆ ಅನ್ನಬೇಡಿ.
    ನಾನು ಇಲ್ಲಿ ಗಂಡಸು ಎನ್ನುವುದನ್ನು ಮರೆತು ಮಾತಾಡಿದ್ದೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading