
ಶ್ರೀದೇವಿ ಉಡುಪ
ಹುಟ್ಟು ಮೋಹಗಳ
ಹೆಚ್ಚುಗಾರಿಕೆಯಲಿ ಬಿಟ್ಟು
ಸದ್ದಿರದೆ ಎದ್ದು ಹೋದವನ
ಹೆಗಲೇರಿ ಕುಳಿತು ಕೊಡಲು
ಹೊರಟಿರುವ ಸುದ್ದಿಯಾದರು ಏನು..?
ಅಂತ:ಪುರದ ತೆಳು ಬೆಳಕಿನ
ಕತ್ತಲೆಯನೊದ್ದು ಹೊರಗೆ ಕಾದಿದ್ದ
ಕಾರಿರುಳ ಕತ್ತಲೊಳಗಿನ
ಬೆಳಕನರಿಸಿ ಹೊರಟವನ
ಮೌನದ ಮಾರ್ಗಕ್ಕೆ
ಮಾತಂಟಿಸಲು ಹೊರಟಿರುವೆಯೇನು..?
ಗೆಲ್ಲಬಹುದೆ..ಸದ್ದಿರದೆ ಸುದ್ದಿಯಾದವನ
ಹನಿ ನೀರಿಗೂ ಸದ್ದು ಮಾಡುವ
ಸುದ್ದಿಯಾಗದ ನೀನು….?
ಹೆಗಲೇರಿ ಕುಳಿತು,
ಅವನ ತುಟಿಬಿಗಿತದಲಿ
ನಿನ್ನ ವಟ ವಟಕೆ ಅರ್ಥ ಹುಡುಕುತಿರಬಹದೇನು…
ಮಾತು ಜಯಸಿದ ಮಹಾ ಮೌನಿಯಾತ
ನಿನ್ನ ಮಾತಿಗೆ ನಿಲುಕಿದರೆ
ನನಗಿಷ್ಟು ಅರಹುವೆಯೇನು…?





0 Comments