
ಎಲ್ಸಿ ನಾಗರಾಜ್
ಖಾದಿ ಉತ್ಪನ್ನಗಳಿಗೆ ಗಾಂಧೀಜಿ ಬ್ರಾಂಡ್ ಮ್ಯಾನೇಜರ್ ಅಲ್ಲದಿರಬಹುದು ಅದರೆ ಅವರ ಖಾದಿ ಚಳುವಳಿಗೆ ಸುದೀರ್ಘ ಇತಿಹಾಸವಿದೆ.
ಬಿಹಾರದ ಚಂಪಾರಣ್ಯದಲ್ಲಿ ‘ನೀಲಿ ‘ ಬೆಳೆಯಲೇಬೇಕೆಂದು ಆಂಗ್ಲರು ತಾಕೀತು ಮಾಡಿದಾಗ, ರೈತರು ಅಸಹಾಯಕರಾದಾಗ ಗಾಂಧೀಜಿ ಚಂಪಾರಣ್ಯ ಸತ್ಯಾಗ್ರಹ ಆರಂಭಿಸಿದರು.
ಬ್ರಿಟನ್ನಿನ ಎಂಪ್ರೆಸ್ ಬಟ್ಟೆ ಗಿರಣಿ ಉತ್ಪನ್ನಗಳಿಗೆ ಮಾರುಕಟ್ಟೆ ಗಿಟ್ಟಿಸಿಕೊಳ್ಳಲು ಆಂಗ್ಲರು ಬಂಗಾಳದ ದೇಸಿ ನೇಕಾರರ ಬೆರಳನ್ನೇ ಕತ್ತರಿಸತೊಡಗಿದರು.
ಗಾಂಧೀಜಿ ಇಂತ ರಕ್ತಸಿಕ್ತ ಭಾರತದ ಉದ್ದಗಲ ಮುಳ್ಳು ತುಳಿಯುತ್ತ ರಾಷ್ಟ್ರೀಯತೆ ಕಟ್ಟುತ್ತಿದ್ದಾಗ ಸದರಿ ‘ಬ್ರಾಂಡ್ ಮ್ಯಾನೇಜರ್’ ಈ ಲೋಕಕ್ಕೆ ಇನ್ನೂ ಕಣ್ಣೇ ಬಿಟ್ಟಿರಲಿಲ್ಲ.
ಭಾರತದ ನಿಜವಾದ ಸಾಂಸ್ಕತಿಕ ರಾಷ್ಟ್ರೀಯತೆ ಕಟ್ಟಿದವರು ಗಾಂಧೀಜಿ ; ಅವರ ಬಗೆಗೂ ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ; ಯಾಕೆಂದರೆ ನಮಗೆ ಯಾರಿಗೂ ಭಕ್ತರಾಗುವ ಜರೂರುಗಳಿಲ್ಲ;
ನಮ್ಮ ತಲೆ ನಮ್ಮ ಶರೀರದ ಮೇಲಿದೆ





0 Comments