ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಚಯ ಕಾವ್ಯ ಮತ್ತು ಲೇಖನ ಸ್ಪರ್ಧೆ

 


ನಂ. 100, 2ನೇ ಮುಖ್ಯರಸ್ತೆ, 6ನೇ ಬ್ಲಾಕ್, 3ನೇ ಹಂತ, 3ನೇ ಘಟ್ಟ, ಬನಶಂಕರಿ
ಬೆಂಗಳೂರು – 560 085
ಫೋನ್ ನಂ. 080-26791925 ಮೊಬೈಲ್: 98440 63514
prahlad118@yahoo.com
ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಚಯ ಸಾಹಿತ್ಯ ಪತ್ರಿಕೆಯು ಈ ವರ್ಷವೂ ಕನ್ನಡದ ಕಾವ್ಯ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಿದೆ.
ಕಾವ್ಯ ಸ್ಪರ್ಧೆ
ಇದರಲ್ಲಿ ಭಾಗವಹಿಸುವವರು ತಮ್ಮ ಸ್ವಂತ ರಚನೆಯ ಎರಡು ಕವಿತೆಗಳನ್ನು ಕಳುಹಿಸಬೇಕು. ಅನುವಾದಗಳಾಗಲೀ, ಈಗಾಗಲೇ ಪ್ರಕಟಗೊಂಡಿರುವ ಕವಿತೆಗಳಿಗಾಗಲೀ ಅವಕಾಶವಿಲ್ಲ.
 
ಲೇಖನ ಸ್ಪರ್ಧೆ
ಈ ಸ್ಪರ್ಧೆಗೆ ಕೊಟ್ಟಿರುವ ಐದು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 15 ಪುಟಗಳನ್ನು ಮೀರದ ಒಂದು ಲೇಖನ ಕಳುಹಿಸಬಹುದು.
ಲೇಖನ ಸ್ಪರ್ಧೆಯ ವಿಷಯಗಳು
ದ.ರಾ.ಬೇಂದ್ರೆ ಅವರ ಕವಿತೆಯೊಂದರ ಚರ್ಚೆ
ಗಾಂಧೀಜಿ ಅವರ `ಹಿಂದ್ ಸ್ವರಾಜ್’ ಪುಸ್ತಕ ಮತ್ತು ಅದರ ಪ್ರಸ್ತುತತೆ
ಜಾರುವ ಕಾಲದಲ್ಲಿ ನನ್ನ ಊರಿನ ಚಿತ್ರಗಳು
ಕರ್ಣಾಟಕದ ರಾಜಕಾರಣದ ದಿಕ್ಕು-ದಿಸೆ
ಇವತ್ತಿನ ಕನ್ನಡದ ಹೊಸ ಬರಹಗಾರರ ಎದುರಿನ ಸವಾಲುಗಳು
 
ಸ್ಪರ್ಧೆಯ ನಿಯಮಗಳು
ಬರಹಗಳು ಸ್ವತಂತ್ರವಾಗಿದ್ದು, ಎಲ್ಲೂ ಪ್ರಕಟಗೊಂಡಿರಬಾರದು ಸ್
ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಹಾಗೂ ವಯೋಮಿತಿಗಳು ಇಲ್ಲ.
ಸ್ಪರ್ಧೆಗೆ ಕಳುಹಿಸಲಾದ ಹಸ್ತಪ್ರತಿಗಳನ್ನು ವಾಪಸ್ಸು ಕಳುಹಿಸಲಾಗುವುದಿಲ್ಲ.
ಹಸ್ತಪ್ರತಿಯ ಜೊತೆಗೆ ಲೇಖಕರ ಹೆಸರು, ಸಂಪರ್ಕ ವಿಳಾಸಗಳನ್ನು ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಬಹುಮಾನಗಳು ಪುಸ್ತಕ ರೂಪದ್ದಾಗಿದ್ದು ತೀರ್ಪ್ರುಗಾರರ ತೀರ್ಮಾನವೇ ಅಂತಿಮ.  ಆಯ್ದ ಬಹುಮಾನಿತ ಬರಹಗಳು ಸಂಚಯ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತದೆ.
 
ಬಹುಮಾನ ವಿತರಣೆ ಜನವರಿ 31, 2009ರಂದು ಬೆಂಗಳೂರಿನಲ್ಲಿ ನಡೆಯುವ `ಕವಿದಿನ’ದ ಕಾರ್ಯಕ್ರಮದಲ್ಲಿ ನಡೆಯಲಿದೆ. ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ನವೆಂಬರ್ 30, 2008
ಬರಹಗಳನ್ನು ಕಳುಹಿಸಬೇಕಾದ ಸಂಪರ್ಕ ವಿಳಾಸ   ಕೇರಾಫ್ ಜೆನ್ ಹೈಜಿನಿಕ್ಸ್, ನಂ. 86, 8ನೇ ಅಡ್ಡರಸ್ತೆ, ಅಶೋಕನಗರ, ಬನಶಂಕರಿ 1ನೇ ಹಂತ, ಬೆಂಗಳೂರು – 560 050

‍ಲೇಖಕರು avadhi

30 October, 2008

1 Comment

  1. ಡಿ.ಎಸ್.ರಾಮಸ್ವಾಮಿ

    ಪ್ರಹ್ಲಾದ್, ಅಂತೂ ಬಹಳ ದಿನಗಳ ನಂತರ’ಸಂಚಯ’ಸ್ಪರ್ಧೆಯ ವಿವರ ತಿಳೀತು.ಸ್ಪರ್ಧಾ ವಿವರ ರಾಜ್ಯಸುದ್ದಿಯಲ್ಲಿ ಪ್ರಕಟಿಸದ ಪತ್ರಿಕೆಗಳು ಫಲಿತಾಂಶ ಮಾತ್ರ ಪ್ರಕಟಿಸುತ್ತಿದ್ದವು. ಅವಧಿಗೆ ಜೈ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading