ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಕ್ರಮಣ..

-ಉದಯಕುಮಾರ ಹಬ್ಬು

ಸಂಕ್ರಮಣ
ಆಕ್ರಮಣ
ಹಾವುಗಳ ತೋರಣ
ವಿಷದ ಹೂರಣ.
ಭರದಿ
ರಾವಣ
ಕುಂಭಕರ್ಣ
ಕಂಬಳಿ ಹೊದ್ದು.
ಗಾಢವಾಗಿ
ಮಲಗಿದ
ಕವಿಗಳು
ಕವಿತೆಗಳು
ಬೆನ್ನೆಲುಬಿಲ್ಲದ ಹಸಿ ಹಸಿ
ಸುಳ್ಳುಗಳು
ಮುಳ್ಳುಗಳು.
ಮೌನ ಮೊಸಳೆ
ಬಾಯ್ಬಿಡಲಾಗದ
ಮಂಗನಿಗೆ
ಮೋಸ
ಮಾಡಬಹುದು ಒಮ್ಮೆ
ನದಿ ನಡುವೆ
ಉಪಾಯ
ಹೃದಯ ಬಿಟ್ಟು ಬಂದ
ಸುಳ್ಳು ಉಪಾಯ
ಹೇಗಾದರೂ
ಬದುಕಿತು
ಬಡ ಜೀವ

ಸುಳ್ಳಿನಾಟಗಳಲ್ಲಿ
ತಂತಿಯ ಮೇಲೆ
ಬ್ಯಾಲೆನ್ಸ್ ಮಾಡುತ
ಅತ್ತಿತ್ತ. ಓಲಾಡಿದರೂ
ಬೀಳದಂತೆ
ರಕ್ಷಿಸಿದ ಬಿದಿರು ಕೋಲು.
ನಿದ್ದೆ ಬಂದರೆ ಘನವಾಗಿ
ಹೊದ್ದಿ ಮಲಗಿ.
ಬುದ್ಧಿಗೆ ವಿರಾಮ
ಆಗಿ ಗುಲಾಮ

‍ಲೇಖಕರು Admin

17 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading