ವೆಂಕಟ್ರಮಣ ಭಟ್ ‘ಅವಧಿ’ ಓದುಗರಿಗೆ ಸಾಕಷ್ಟು ಪರಿಚಿತರೇ. ‘ರೂಪಾಂತರ’ ಬ್ಲಾಗ್ ಹೊಂದಿರುವ ಭಟ್ಟರು ‘ಅವಧಿ’ಯಲ್ಲಿ ತಮ್ಮ ಕಲೆಗಾರಿಕೆಯ ಮೂಲಕ ಕಾಣಿಸಿಕೊಂಡಿದ್ದಾರೆ. ಅವರು ಹೀಗೆ ತಮ್ಮ ಮನದಲ್ಲಿ ಅಚ್ಚೊತ್ತಿದ ಎಪ್ರಿಲ್ ಹೂಗಳನ್ನು ‘ಅವಧಿ’ಗಾಗಿ ಕಳಿಸಿಕೊಟ್ಟಿದ್ದಾರೆ. ಅವರ ವಿವರ ಪರಿಚಯ ಇಲ್ಲಿದೆ-
ನಾನು ಹುಟ್ಟಿದ್ದು ಉತ್ತರಕನ್ನಡದ ಯಲ್ಲಾಪುರವೆಂಬ ಕಾನಿನ ಮತ್ತು ಅಡಿಕೆ ತೋಟ-ಭತ್ತದ ಗದ್ದೆಗಳ ಊರಿನಲ್ಲಿ. ಬೆಳೆದದ್ದು ಅಡಿಕೆ ಬೇಯಿಸುವ ವಲೆಯ ಮುಂದೆ ಕಥೆ ಆಡುತ್ತ, ಅಪ್ಪನ ಜೊತೆ ತಾರೆಗಳನ್ನು ನೋಡುತ್ತ,ಏರೋಪ್ಲೇನಿನ ಹಾಗೆ ಹಾರುವ ಡ್ರಾಗನ್ ಫ್ಲೈನ ಬಾಲಕ್ಕೆ ದಾರ ಕಟ್ಟಿ ಬಿಡುತ್ತ,ತೋಳಂಭಟ್ಟನ ಹಾಗೆ ಜಿಗಿಯುತ್ತ ಹಾಗು ನೇರಳೆ ಮರ ಹತ್ತುತ್ತ.ಆಮೇಲೆ ಸ್ವಲ್ಪ ಸಿರಸಿಯಲ್ಲಿ,ಸ್ವಲ್ಪ ಬೆಳಗಾವಿಯೆಂಬ ಗಡಿನಾಡಲ್ಲಿ. ಈಗ ಹೊಸ ವಿಳಾಸ,ಬೆಂಗಳೂರೆಂಬೊ ಬೆಂಗಳೂರು. ನನಗೆ ಇಷ್ಟವಾಗದೆ ಇರುವ ವಿಷಯಗಳು ಕಮ್ಮಿ,ತಿಳಕೊಳ್ಳುವ ನಿರಂತರ ಕುತೂಹಲ.
]]>










ಇದೊಂದು ಸುಂದರ ದೃಶ್ಯ ಕಾವ್ಯ. ಇವರ ಕುಸುರಿ ಚಿತ್ರಗಳನ್ನು ಅವಧಿಯಲ್ಲಿ ನೋಡುತ್ತಾ ಇದ್ದೇನೆ. ಸರಳ ರೇಖೆಗಳಲ್ಲಿ, ಕೆಲವೇ ಬಣ್ಣಗಳಲ್ಲಿ ಅದೆಷ್ಟು ಜೀವ ತುಂಬುತ್ತಾರೆ ಇವರು. ಭಟ್ಟರೇ, ನಿಮ್ಮ ಕುಂಚ ಕಿತ್ತಿಟ್ಟು ಕೊಳ್ಳುವ ಆಸೆ ನನ್ನದು. ಹಾಗಾದರೂ ನಿಮ್ಮ ಪ್ರತಿಭೆಯಲ್ಲಿ ನನಗೆ ಒಂದಿಷ್ಟು ಒಲಿದೀತು ಅಂತ. ಸೂರಿ.
ಖುಷಿಯಾಯ್ತು ಅವಧಿ. ನೀವು ನನಗೆ, ನನ್ನೊಳಗಿನ ಕಲೆಗೆ ಜೀವ ತುಂಬುತ್ತಿದ್ದೀರಿ ಸೂರಿ..
-ವೆಂಕಟ್ರಮಣ
thumba chennagive…
bhatre… nimage yashassagali
Good ಭಟ್re,Keep it up 🙂