ವಿಶಾಲ್ ಮ್ಯಾಸರ್ ಹೊಸ ಕವಿತೆ ‘ಕವಿಯೊಬ್ಬ ಬರೆಯುತ್ತಾನೆ’

  ವಿಶಾಲ್ ಮ್ಯಾಸರ್

**

ಕವಿಯೊಬ್ಬ ಬರೆಯುತ್ತಾನೆ

ಇದು “ಕಲ್ಲು ಕರಗುವ ಸಮಯ”

ಕಲ್ಲುಗಳು ಮರಗುತ್ತವೆ ಒಳಗೊಳಗೇ

ಅಯ್ಯೊ ನಾವು ಕರಗಿದರೆ ನಾವು ನಾವಾಗಿ ಇರುತ್ತೀವಾ…?

ಕಲ್ಲು ಅರಳಿ ಹೂವಾದರೆ …?

ಥೂ ಥೂ ಕಲ್ಲು ದೇವರಿಗೆ

ಹೂವಿಡಬೇಕು

ದೇವರು ಹೂವಿನಂತೆ ಮೃದುವಲ್ಲ

ಒಂದು ದುಂಬಿಯನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ

ಇನ್ನು ಜೇನು…?

ಹಾಲು ಉಕ್ಕದ ಎದೆಯ

ಬಗೆದರೆ ಬರೀಯ

ರಕ್ತ,ಮಾಂಸ

ಇದ್ದ ಜೇನೆಲ್ಲ ದ್ವಂಸ

ಕಲ್ಲು ಕರಗುವ ಸಮಯಕ್ಕೆ 

ಏನೆಲ್ಲವಾಗಬಹುದು…

ಹನಿ ನೀರು ಹೀರದ ತುಟಿ

ಎಳನೀರು ಬಲು ತುಟ್ಟಿ

ಮುತ್ತು ತುಟ್ಟಿ

ತುತ್ತು ಬಲು ಗಟ್ಟಿ

ಕ್ಷಮಿಸಿ

ನಾನು ಕವಿಯಲ್ಲ

ಯಾವ ಶಿಲೆಯಲ್ಲೂ

ಶಿಲ್ಪ ಕಡೆಯುವುದಿಲ್ಲ

ಕಡೆದು ಕಡೆದು

ಕಲ್ಲ ಕೆಡಸುವುದಿಲ್ಲ…

     

‍ಲೇಖಕರು avadhi

December 20, 2023

ನಿಮಗೆ ಇವೂ ಇಷ್ಟವಾಗಬಹುದು…

ಹೊಸದೇನ ಬರೆಯಲಿ..?

ಹೊಸದೇನ ಬರೆಯಲಿ..?

ಮನುಷ್ಯ ಜಾತಿ ತಾನೊಂದೆ ವಲಂ ಡಾ. ಪದ್ಮಿನಿ ನಾಗರಾಜು - ಹೊಸದೇನ ಬರೆಯಲಿ ಯುದ್ದದ ಬಗ್ಗೆ ಸಾವಿನ ಸೂತಕವಲ್ಲದೆ ಗೆಲುವು ಒಬ್ಬರಿಗೆ ಸೋಲು...

ಆಪ್ತ ನಗುವೊಂದು ಅಪರಿಚಿತವಾದಾಗ

ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This