ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವಿಮುಕ್ತಿ’ ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ


ಪಿ ಶೇಷಾದ್ರಿಯವರ ವಿಮುಕ್ತಿಗೆ ರಜತ ಕಮಲ ಸಿಕ್ಕಿದೆ. ಕಾಸರವಳ್ಳಿಯ ನಂತರ ಕನ್ನಡದಲ್ಲಿ ಬಹು ಮುಖ್ಯ ದಿಗ್ದರ್ಶಕರೆನಿಸಿಕೊಂಡಿರುವವರು ಶೇಷಾದ್ರಿ. ಅರ್ಥಪೂರ್ಣ ಚಿತ್ರಗಳನ್ನು ನೀಡುತ್ತಿರುವ ಶೇಷಾದ್ರಿಯವರಿಗೆ ಸಂವಾದ ಬಳಗ ಅಭಿನಂದನೆ ಸಲ್ಲಿಸುತ್ತದೆ.
ಈ ಕಾರಣವನ್ನೇ ನೆವವಾಗಿಟ್ಟುಕೊಂಡು ’ವಿಮುಕ್ತಿ’ ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ ನಡೆಸಲು ಸಂವಾದ ನಿರ್ಧರಿಸಿದೆ.
ಈ ಹಿಂದಿನ ಸಂಚಿಕೆಗಳಲ್ಲಿ ಪ್ರಸ್ತಾಪಿಸಿದಂತೆ ಪರ್ಯಾಯ ಸಿನೆಮಾಗಳನ್ನು ಬೆಂಬಲಿಸಲು ಸಂವಾದ ಡಾಟ್ ಕಾಮ್ ಸದಾ ಬದ್ಧವಾಗಿದೆ. ಹಣದ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನಪ್ರಿಯ ಚಿತ್ರಗಳ ನಡುವೆ ಇಂತಹ ಚಿತ್ರಗಳನ್ನು ಪ್ರೋತ್ಸಾಹಿಸುವುದು ಸಹೃದಯ ನೋಡುಗನ ಜವಾಬ್ದಾರಿಯೂ ಹೌದಲ್ಲವೆ?
ವಿಮರ್ಶಾ ಸ್ಪರ್ಧೆಗೆ ಸಂಬಂಧಿಸಿದಂತೆ ವಿವರಗಳು.
ವಿಮುಕ್ತಿ ವಿಮರ್ಶಾ ಸ್ಪರ್ಧೆ:
ಮೊದಲನೇ ಅತ್ಯುತ್ತಮ ವಿಮರ್ಶೆಗೆ ೨೦೦೦ ರೂಪಾಯಿಗಳು
ಎರಡನೇ ಅತ್ಯುತ್ತಮ ವಿಮರ್ಶೆಗೆ ೧೦೦೦ ರೂಪಾಯಿಗಳು
ವಿದ್ಯಾರ್ಥಿ ವಿಭಾಗದ ಅತ್ಯುತ್ತಮ ವಿಮರ್ಶಾ ಲೇಖನಕ್ಕೆ ೨೦೦೦ ರೂಪಾಯಿಗಳು.
ಷರತ್ತುಗಳು:
೧. ಬರಹವು ವಿಮರ್ಶಾತ್ಮಕವಾಗಿರಲಿ.
೨. ಪದಗಳ ಮಿತಿಯಿಲ್ಲ.
೩. ಬರಹ ಸ್ವಂತದ್ದಾಗಿರಲಿ.
೪. ಮಾರ್ಚ್ ೧೦ರೊಳಗೆ ನಮ್ಮ ಕೈಸೇರಲಿ
೫. ನಿಮ್ಮ ಲೇಖನಗಳನ್ನ  kiran@samvaada.com ಗೆ ಈ ಮೇಲ್ ಮಾಡಿ ಅಥವಾ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ನಂ ೧೦೩, ಮೊದಲನೇ ಮಹಡಿ
ಜನಪ್ರಿಯ ಲೇಕ್ ವ್ಯೂ ಅಪಾರ್ಟಮೆಂಟ್
ಕೋಡಿಚಿಕ್ಕನಹಳ್ಳಿ, ಬೆಂಗಳೂರು-೫೬೦೦೭೬
ದೂರವಾಣಿ: ೦೮೦-೨೬೪೮೪೬೧೭
ಸಂವಾದ ತಂಡ

‍ಲೇಖಕರು avadhi

17 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading