ವಸುಂಧರಾ ಕದಲೂರು
ಆ ಮಗು ಇಲ್ಲಿ ಕಣ್ಬಿಟ್ಟು
ಕಲಿಯುವಾಗ ಹೇಳಿದೆವು
ಇದು ನಮ್ಮ ನೆಲ, ನಮ್ಮ ಗಾಳಿ
ಈ ನದಿಗಳು ನಮ್ಮವೆಂದು
ಈ ಮಗುವೂ ಹುಟ್ಟಿ ಬೆಳೆವಾಗ
ಹೇಳಿಕೊಟ್ಟೆವು ನೋಡಿದು
ನಮ್ಮದು; ಈ ನೆಲ ಗಾಳಿ
ನದಿ ನೀರು ನಮ್ಮದೆಂದು.

ಬೆಳೆದ ಮಕ್ಕಳು ಪ್ರತಿಪಾದಿಸ
ಹೊರಟರು ನನ್ನದಿದು ನನ್ನದಿದು
ನನ್ನದಿದೆಂದು; ನಮ್ಮದೆನ್ನುವ ಭಾವ
ಮರೆಯಾಗಿ ಎಂದೋ..
ಕೊನೆಗೆ ಬಡಿದಾಡುತಲೇ ನೆಲಕೆ
ಒಡಲು, ಗಾಳಿಗೆ ಉಸಿರುಗೊಟ್ಟು;
ನದಿ ನೀರ ಕೆಂಪಗಾಗಿಸಿ ಹೊರಟು
ಹೋದ ಅವರು, ಅದಾರ ಮಕ್ಕಳು !?






ಇಷ್ಟವಾಯಿತು ಈ ಕವನ … ಎಷ್ಟು ಪ್ರಸ್ತುತ ಈ ಕವನ …
ಚೆನ್ನಾಗಿದೆ ಕವಿತೆ.ವಸುಂಧರ