ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣುಕಾಯಿ ಮಾಡಿಸುತ್ತಾರೆ..

– ಶಿವಪ್ರಸಾದ ಪಟ್ಟಣಗೆರೆ


ಭಾಷೆಗೂ ಸಂಸ್ಕೃತಿಗೂ ಇರುವ ಸಂಬಂಧವೇನು ? ಭಾಷೆ ನಮಗರಿವಿಲ್ಲದೆ ರೂಪುಗೊಂಡದ್ದು. ಇನ್ನು ಸಂಸ್ಕೃತಿಯು ಉಳಿಕೆ,ದಾಖಲೆಯ ಅವಶೇಷ, ಬೌತಿಕ ಉಳಿಕೆ ಎಂದು ಹೇಳುವುದುಂಟು. ಭಾಷೆಯು ಆ ಜನಾಂಗವನ್ನೋ ಆ ಜನಾಂಗದ ರಚನೆ, ಸ್ವರೂಪವನ್ನೂ ಬಿಂಬಿಸುತ್ತದೆ. ಭಾಷೆ ಹೇಗೆ ಭೌತಿಕವೋ ಅಷ್ಟೇ ಮಾನಸಿಕವೂ ಕೂಡ ಹೌದು.
ಒಂದು ಭಾಷೆ ಆ ಸಂಸೃತಿಯಲ್ಲಿ ಆಗುತ್ತಿರುವ ಚಲನಶೀಲತೆ ಹಾಗೂ ಪರಿಸರದ ಬದಲಾವಣೆಗಳು ಆಧುನಿಕತೆಗಳ ಚಿತ್ರಣವನ್ನು ಸಂಪೂರ್ಣವಾಗಿ ಬಿಚ್ಚಿಡುತ್ತವೆ. ಪ್ರತೀ ಸಮುದಾಯದಲ್ಲೂ ಭಾಷೆ – ಭಾಷೆಗಳ ನಡುವಣ ತಿಕ್ಕಾಟ, ಘರ್ಷಣೆಗಳು ನಡೆಯುತ್ತಾ ಬಂದಿವೆ. ಯಾವುದೋ ಶಕ್ತಿ ರಾಜಕಾರಣಗಳು ಪ್ರಭಲತೆಗಳು ಮತ್ತೊಂದು ಭಾಷೆಯನ್ನ ಅಧೀನಗೊಳಿಸಿಕೊಳ್ಳುತ್ತಾ ಬಂದಿವೆ. ಇವುಗಳ ನಡುವೆ ತಮ್ಮ ಸ್ಥಾನದ ಉಳಿಕೆ, ವಿಸೃತತೆ ಇವುಗಳ ಬಗಗೆಗಿನ ಸಂಘರ್ಷಗಳು ಇಂದಿಗೂ ಆಗುತ್ತಲೇ ಇವೆ.
ಈ ಹಿನ್ನೆಲೆಯಲ್ಲಿ ಒಂದು ಭಾಷೆ ಕೀಳಿರಿಮೆಗೆ ಈಡಾಗಿ ಪ್ರಧಾನ ಭಾಷೆಯನ್ನು ಅನುಸರಿಸುವ ದಿಕ್ಕಿನತ್ತ ಸಾಗುತ್ತಿದೆ. ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಹೇಳುವುದಾದರೆ ಸಾಂಸೃತಿಕ ಹಿಂಬೀಳುವಿಕೆಯು ನಮಗೆ ಅರಿವಿಲ್ಲದಂತೆ ಜರುಗಿದೆ. ಇವುಗಳನ್ನೇ ಶುದ್ಧ ಅಥವಾ ಶಿಷ್ಟ ಎಂಬ ಭಾಷೆಯ ಮುಖಗಳನ್ನ ರೂಪಿಸಿ ಭಾಷೆಯನ್ನ ಸರಿಗಟ್ಟುವಂತಹ ವ್ಯತಿರಿಕ್ತ ಪರಿಣಾಮಗಳೂ ಸಾಗುತ್ತಿವೆ. ಇವೆಲ್ಲವೂ ಭಾಷೆಯ ಬಗೆಗಿನ ಆರೋಪಗಳು ಮತ್ತು ದೋಷಗಳೂ ಹೌದು.
ಉದಾಹರಣೆಗೆ – ದೇವತೆಗಳೆಲ್ಲಾ ಶಿಷ್ಟ ಭಾಷೆಯನ್ನು ಸಂವಹಿಸುತ್ತಾರೆ. ಸಂಸೃತವನ್ನು ಮಾತನಾಡುತ್ತಾರೆಂಬ ಆರೋಪಗಳಿಗೆ ವಿರುದ್ಧವಾಗಿ ದೆಸೀಯ ಪ್ರಾದೇಶಿಕ ಭಾಷೆಗಳ ಹಿನ್ನೆಲೆಯಲ್ಲಿಯೂ,ನಾಟಕದ ಹಿನ್ನೆಯಲ್ಲಿ ತಮ್ಮ ಆಡು ಬಾಷೆಯ ರೂಪಕ ಮತ್ತು ವಾಹಕಗಳನ್ನು ನೀಡಿ ತಮ್ಮ ಭಾಷಾ ಸಾಂಸೃತಿಕ ಚೈಕಟ್ಟುಗಳನ್ನ ಬಿಂಬಿಸಿದ್ದಾರೆ. ಈ ಕಾರಣದಿಂಧ ಬ್ರಹ್ಮನೂ ಇಲ್ಲಿ ಬೊಮ್ಮನಾಗುತ್ತಾನೆ, ಶಿವ ಸುರಪಾನಗಳನ್ನ ಕುಡಿದು ತಮಟೆಗಳೊಡನೆ ತಾನು ತಕದಿಮಿಸುತ್ತಾನೆ.
ಅಷ್ಟೇ ಅಲ್ಲದೇ ಭಾಷೆಯನ್ನು ಸೂಚಕವಾಗಿರಿಸಿಕೊಂಡ ಸನ್ನಿವೇಷಗಳೂ ಆಗಿವೆ. ತನ್ನ ಭಾಷೆಯ ತುಳಿತವೋ, ಕಡಗಣನೆಯೋ ಆ ಭಾಷೆಯು ತನ್ನ ಶ್ರೇಷ್ಠತೆಯನ್ನ ತೋರ್ಪಡಿಸಿಕೊಳ್ಳುವ ಮುಖಾಂತರ ಆ ಭಾಷೆ ತನ್ನನು ತಾನು ಬಿಂಬಿಸಲೆತ್ನಿಸಿದೆ. ಈ ಹಿನ್ನೆಲೆಯಲ್ಲಿ ಹಲವು ಸಾದ್ಯತೆಗಳು ಸಹ ಸಫಲಗೊಂಡಿವೆ.
ಉದಾ – ದ್ಯಾವನೂರರ ಭಾಷೆ ಭಾಷೆ. ದೇವನೂರರ ಕುಸುಮಬಾಲೆ

ಭಾಷೆಯ ಮೇಲೆ ಸಂಸ್ಕೃತಿಯನ್ನ ಹೇರುವಂತದ್ದು
ನಾನಿನ್ನು ಹತ್ತನೇ ತರಗತಿಯಲ್ಲಿದ್ದೆ.ಆಗತಾನೆ ಹೊಸದಾಗಿ ಬಂದಿದ್ದ ಇಂಗ್ಲೀಷ್ ಶಿಕ್ಷಕ ನಮ್ಮನ್ನೆಲ್ಲಾ ಖೈದಿಗಳಂತೆ ನೋಡುತ್ತಾ ಇಂಗ್ಲೀಷ್ ಭಾಷೆಯ ಹೇರಿಕೆಯನ್ನ ಮಾಡಲೆತ್ನಿಸಿದ್ದರು. ಇನ್ನು ಆಗತಾನೆ ಇಂಗ್ಲೀಷ್ ಕಲಿಯುತ್ತಿದ್ದ ನಮಗೆ ಇಂಗ್ಲೀಷ್ ಮತ್ತಷ್ಟೂ ಭಯವನ್ನು ಉಂಟು ಮಾಡಲು ಸಾಧ್ಯವಾಯಿತು. ಆ ಶಿಕ್ಷಕರೊಂದಿಗೆ ಮಾತನಾಡಬೇಕಾದರೆ ಖಡ್ಡಾಯವಾಗಿ ಇಂಗ್ಲೀಷಿನಲ್ಲೆ ಮಾತನಾಡಬೇಕಿತ್ತು ಇಲ್ಲದಿದ್ದರೆ ದಂಡವನ್ನು ತೆರಬೇಕಾಗಿತ್ತು. ಇನ್ನೂ ದುರಂತವೆಂದರೆ ಮದ್ಯದಲ್ಲಿ ಒಂದು ಕನ್ನಡ ಪದವನ್ನು ಬಳಸಿದರೆ ಒಂದು ಪದಕ್ಕೆ ಇಂತಿಷ್ಟು ದಂಡತೆರಬೇಕೆಂದು ನಿಗದಿ ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಂದೇಹ, ಗೊಂದಲಗಳನ್ನ ವ್ಯವಹರಿಸಲು ಆ ಶಿಕ್ಷಕರೊಂದಿಗೆ ಸಾಧ್ಯವಾಗಲೇ ಇಲ್ಲ. ಇದಕ್ಕೆ ಹೆದರಿ ನಾವು ಅವರೊಂದಿಗೆ ಮಾತನಾಡಲೇ ಇಲ್ಲ. ಇದು ಒಂದು ಭಾಷೆಯನ್ನೋ ಒಂದು ಸಂಸೃತಿಯನ್ನೋ ಹೇರುವಂತ ದುಷ್ಟ ದರಿದ್ರ ಪದ್ದತಿ.
ಸ್ಥಿತಿ :: ಲಯ
ಅನ್ಯ ಸಾಂಸ್ಕೃತಿಕ ಸಂಗತಿಗಳು ಕನ್ನಡಭಾಷೆಯಲ್ಲಿ ಅಚಾನಕ್ಕಾಗಿ ಕಾಣಿಸಿಕೊಳ್ಳುತ್ತಲೇ ಇವೆ. ಇದು ಜೀವನ ಶೈಲಿಯ ಬದಲಾವಣೆ ಹಾಗೂ ಈಗಿನ ತುರ್ತು ಕೂಡ ಹೌದು. ಕೆಲವೊಮ್ಮೆ ಭಾಷೆಗಿಂತ ಬದುಕು ಮುಖ್ಯವಾಗಿಬಿಡುತ್ತೆ. ಈ ಹಿನ್ನೆಲೆಯಲ್ಲಿ ಭಾಷೆಯನ್ನು ಉಳಿಸುವ ಪ್ರಯೋಗಿಸುವ ಸಾದ್ಯತೆಗೂ ಗೌಣ. ಇನ್ನು ಭಾವನೆಗಳಿಗೆ ಅಂಡಿಸಿಕೊಂಡ ಕನ್ನಡಿಗರಿಗೆ ಮಾತ್ರ ಭಾಷೆಯ ಬಗ್ಗೆ ಸದಾ ಹೋರಾಡುವ ತವಕ. ವಾರಕ್ಕೊಮ್ಮೆಯ ವರ್ಷಕ್ಕೊಮ್ಮೆಯ ಹಬ್ಬದಂತೆ ಕನ್ನಡವನ್ನ ಪೂಜಿಸಿ ಹಣ್ಣುಕಾಯಿ ಮಾಡಿಸುತ್ತಾರೆ. ಇನ್ನಿತರೆ ದಿನಗಳಲ್ಲಿ ಪರ ಭಾಷೆಯನ್ನ ತಮ್ಮ ದೈನಂದಿನ ಉಪಹಾರದಂತೆ ಯಥೇಚ್ಚವಾಗಿ ಸೇವಿಸುತ್ತಾ ರಕ್ತಗತಗೊಳಿಸಿಕೊಳ್ಳುತ್ತಾರೆ. ಇದು ಚಾಲ್ತಿಯಲ್ಲಿರುವ NON – POLLUTED vehicle . ಇಷ್ಟೇ ಅಲ್ಲದೆ ಈಗತಾನೆ ಚಿಗುರುತ್ತಿರುವ ಚಿಗುರೆಲೆಗಳಿಗೂ ಮುಂದೆಂದೂ ಬಳಸದಂತೆ ಭದ್ರ ಬುನಾದಿಗಳನ್ನ ಹಾಕಿಬಿಟ್ಟಿದ್ದೇವೆ. ಇಲ್ಲಿದೆ ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

‍ಲೇಖಕರು avadhi

3 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading