ಮುಖಪುಟ ವಿನ್ಯಾಸದ ಮೊದಲುಗಳು
ಎಷ್ಟೋ ದಿನಗಳ ಹಿಂದೆ ಎನ್ವಿ ಪುಸ್ತಕ ಪ್ರಾಧಿಕಾರಕ್ಕೆ ಕವನ ಸಂಕಲನ ಕಳಿಸಿದ್ದೇನೆ , ಆಯ್ಕೆ ಆದರೆ ಪುಸ್ತಕದ ಮುಖಪುಟ ಮಾಡಿಕೊಡ್ತಿಯಾ ಅಂತಾ ಕೇಳಿದಾಗ ನಾನೇ ಮಾಡಿಕೊಡ್ತಿನಿ ಬೆರೆಯಾರಿಗೂ ಕೊಡಬೇಡ ಎಂದು ಹೇಳಿದ್ದೆ. ಸ್ವತಃ ಅವನೆ ವಿನ್ಯಾಸಕಾರನಾಗಿದ್ದು ನನಗೆ ಅವಕಾಶ ಕೊಟ್ಟಿದ್ದ. ಆದರೆ ಪ್ರಾಢಿಕಾರದಿಂದ ಆಯ್ಕೆ ಆಗುವುದಕ್ಕೆ ಇನ್ನು ತುಂಬಾ ಸಮಯವಿದ್ದಿತು. ನಡುವೆಯೇ ಚೈತ್ರರಶ್ಮಿ ಯು ಕಥಾಸಂಕಲನ ತಯಾರಿಯಲ್ಲಿದ್ದಾಗ ರಾಮಣ್ಣ ನಿಗೆ ನನ್ನ ಶಿಫಾರಸ್ಸು ಮಾಡಿದ್ದು ಎನ್ವಿಯೆ. ಎನ್ವಿಯ ಪುಸ್ತಕದ ಸುದ್ದಿಯೇ ಇಲ್ಲದಿದ್ದಾಗ , ಮಧ್ಯದಲ್ಲಿಯಯೇ ಬಂದು ಮೊದಲೇ ಅಚ್ಚಾಗಿದ್ದು ಕನ್ನಡಿ ನೆರಳಿನ ಬಿಂಬ ಪುಸ್ತಕ , ನನ್ನ ಮೊದಲ ಪುಸ್ತಕ ಮುಖಪುಟ ವಿನ್ಯಾಸವಾಯಿತು. ನಂತರ ಪ್ರಾಧಿಕಾರದಿಂದ ಸಹಾಯಧನ ಪಡೆದ ಪ್ರವೀಣ್ ಸಂಪ ಹಾಗೂ ಆದರ್ಶ ಕೊಂಕೋಡಿ ಅವರ ಪುಸ್ತಕ ವಿನ್ಯಾಸ ಮಾಡುವ ಅವಕಾಶ ಸಿಕ್ಕಿ ಅವರ ಪುಸ್ತಕದ ಮುಖಪುಟ ವಿನ್ಯಾಸವು ಆಗಿ ಅಚ್ಚಿಗೆ ಸಿದ್ಧವಾಗಿದ್ದವು, ಆದರೆ ಮೊದಲು ಹೇಳಿದ ಎನ್ವಿಯ ಪುಸ್ತಕವೇ ಆಗಿರಲಿಲ್ಲ.. ಅಂತೂ ಇಂತೂ ಕೊನೆಗೂ, ಕಡೆಗೂ, ಎನ್ವಿಯ ಪುಸ್ತಕವು ಮುಗಿದು, ಅಂದುಕೊಂಡಂತೆ ಚನ್ನಾಗಿ ಮೂಡಿಬಂದಿದೆ,
ಅನಿಮೇಶನ್ ವೆಬ್ ಸೈಟ್ ವಿನ್ಯಾಸದಲ್ಲಿ ಪರಿಣಿತಿ ಹೊಂದಿದ್ದರು , ಪುಸ್ತಕ ಪುಟ ವಿನ್ಯಾಸ ಮಾಡಿರಲಿಲ್ಲ… ಅಷ್ಟೊಂದು ಪರಿಣಿತಿಯು ಹೊಂದಿರಲಿಲ್ಲ ಆದಾಗ್ಯು ನನ್ನ ಮೇಲೆ ನಂಬಿಕೆ ಇಟ್ಟು , ಅವಕಾಶ ನೀಡಿದಕ್ಕೆ ಎಲ್ಲರಿಗೂ ನನ್ನ ಧನ್ಯವಾದಗಳು..
೩ ಪುಸ್ತಕಗಳು ಅಚ್ಚಾಗಿ ಪುಸ್ತಕ ಪ್ರಾಧಿಕರದ ಕೈ ಸೇರಿದೆ.
-ರಾಜೀವ್ ಕಾರೆಮನೆ










bahala chennagide raajeev… all the best..
ಒಂದು ತಪ್ಪಾಗಿದೆ ಅದೇನೆಂದರೆ ರಾಜೀವ್ ಕಾಗೆಮನೆ ಎನ್ನುವುದು ರಾಜೀವ್ ಕಾರೆಮನೆ ಆಗಬೇಕು.